ಸನ್ಮಾನಗಳು ಸಮಾಜದಲ್ಲಿ ವ್ಯಕ್ತಿಗತವಾಗಿ ಹೆಚ್ಚಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ : ಸಿದ್ದುಗೌಡ

0
133

ಶಹಾಬಾದ:ಸನ್ಮಾನಗಳು ಸಮಾಜದಲ್ಲಿ ವ್ಯಕ್ತಿಗತವಾಗಿ ಹೆಚ್ಚಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಚಿತ್ತಾಪೂರ ಎಪಿಎಮಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ಹೇಳಿದರು.

ಅವರು ನಗರದ ಕನ್ನಡ ಭವನದಲ್ಲಿ ರೈತ ಸಂಘದಿಂದ ಆಯೋಜಿಸಲಾದ ನೂತನ ಎಪಿಎಮಸಿ ಅಧ್ಯಕ್ಷರಿಗೆ ಹಾಗೂ ಪತ್ರಕರ್ತ ಸಂಘದ ಪದಾಧಿಕಾರಿಗಳಿಗೆ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ತಾಲೂಕಿನ ಎಪಿಎಮಸಿಯನ್ನು ಅಭಿವೃದ್ಧಿ ಮಾಡುವುದೇ ನನ್ನ ಕನಸು.ಅಲ್ಲದೇ ರೈತ ಭವನ, ರೈತರಿಗಾಗಿ ಅಲ್ಲಿ ಉಳಿದುಕೊಳ್ಳಲು ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ನನ್ನ ಕರ್ತವ್ಯ. ಈ ನಿಟ್ಟಿನಲ್ಲಿ ನಾನು ಅಭಿವೃದ್ಧಿಗಾಗಿ ಮೊದಲ ಹೆಜ್ಜೆ ಇಡುತ್ತಿದ್ದೆನೆ.ಅಲ್ಲದೇ ರೈತರ ಹಿತ ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ.ಅದಕ್ಕೆ ತಮ್ಮೆಲ್ಲರ ಸಹಕಾರ ಹಾಗೂ ಮಾರ್ಗದರ್ಶನವಿರಬೇಕು ಎಂದು ಹೇಳಿದರು.

ರೈತ ಸಂಘದ ಗೌರವಾಧ್ಯಕ್ಷ ಮರಲಿಂಗ ಕಮರಡಗಿ ಮಾತನಾಡಿ, ರೈತ ಈ ದೇಶದ ಬೆನ್ನೆಲುಬು ಎಂದು ಭಾಷಣಕ್ಕೆ ಮಾತ್ರ ಸೀಮಿತ ಮಾಡಿದ್ದಾರೆ ಹೊರತು, ರೈತರ ಪರವಾಗಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಿಲ್ಲ. ಆದರೆ ಇಂದು ನಿಮಗೆ ಸಿಕ್ಕ ಅಧಿಕಾರವನ್ನು ಬಳಸಿಕೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಪಿಎಮಸಿ ಯಲ್ಲಿ ನಿರ್ಮಾಣಗೊಂಡ ರೈತ ಭವನದಲ್ಲಿ ಮೂಲಸೌಲಭ್ಯಗಳನ್ನು ಒದಗಿಸಿ, ಆದಷ್ಟು ಬೇಗನೆ ಉದ್ಘಾಟಿಸಬೇಕೆಂದು ತಿಳಿಸಿದರು. ಇಂದು ಅಧಿಕಾರ ಸಿಗುತ್ತದೆ, ಅಲ್ಲದೇ ಬದಲಾಗುತ್ತಲೇ ಇರುತ್ತವೆ.ಅಧಿಕಾರ ಇರುವ ಸಮಯದಲ್ಲಿ ಮಾಡುವ ಉತ್ತಮ ಕಾರ್ಯಗಳು ಅವರ ಸೇವೆಯನ್ನು ಜೀವಂತವಾಗಿ ಇರಿಸುತ್ತವೆ.ಅದಕ್ಕಾಗಿ ಉತ್ತಮ ಕಾರ್ಯಗಳಿಗೆ ನಮ್ಮೆಲ್ಲರ ಸಹಕಾರವಿರುತ್ತದೆ ಎಂದು ಹೇಳಿದರು.

ಎಪಿಎಮಸಿ ಸದಸ್ಯ ವಿಶ್ವರಾಧ್ಯ ಬೀರಾಳ, ಪತ್ರಕರ್ತ ಸಂಘದ ಸಹಕಾರ್ಯದರ್ಶಿ ರಘುವೀರಸಿಂಗ ಠಾಕೂರ, ಉದ್ದಿಮೆದಾರ ಡಿ.ಸಿ.ಹೊಸಮನಿ, ಕಸಾಪ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ರೈತ ಸಂಘದ ಮಲ್ಲಿಕಾರ್ಜುನ ಪೂಜಾರಿ ವೇದಿಕೆಯ ಮೇಲಿದ್ದರು.
ಸಂಗೋಳಿ ರಾಯಣ್ಣ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ, ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಶಂಕರ ಕೋಟನೂರ್, ಶಿವಾನಂದ ಪೂಜಾರಿ,ರಾಜು ಕುಂಬಾರ, ರಮೇಶ ಜೋಗದನಕರ್, ಶಾಂತಪ್ಪ ಹಡಪದ,ಗುಂಡಪ್ಪ ಕುಂಬಾರ, ಸಂತೋಷ ದೊಡ್ಡಮನಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here