ಕಲಬುರಗಿ: ಕನ್ನಡ ಭೂಮಿ ಜಾಗೃತಿ ಸಮಿತಿ ವತಿಯಿಂದ ಹೊಸ ವರ್ಷದ ದಿನ ದರ್ಶೀಕೆಯನ್ನು ಇಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರು ಇಂದು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು ಕನ್ನಡ ನಾಡಿನ ಭಾಷೆ ನೆಲ ಜಲ ಸಂರಕ್ಷಣೆಗೆ ಬದ್ಧರಾಗಿರಬೇಕು.ಕನ್ನಡ ಸೇವೆಗೆ ಸದಾ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿದರು.ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ, ಗುರುಲಿಂಗಪ್ಪ ಟೆಂಗಳಿ, ಅರುಣ ಕುಲಕರ್ಣಿ, ಶ್ರೀಕಾಂತ್ ನಾಗಶೆಟ್ಟಿ, ಸಾಜೀದ ಅಲಿ ರಂಜೋಳ್ಳ್ವಿ, ಬಾಬಾ ಫಕ್ರುದ್ದೀನ,ಶರಣಯ್ಯ ಇಕ್ಕಳಿಕಿ ಮಠ,ಸಾಲೋಮನ ದೀವಾಕರ, ಜ್ಞಾನ ಮಿತ್ರ, ಅಶೋಕ್ ಧಂಗಾಪೂರ,ರೋಹಣ ರಠಕಲ, ಸುನೀಲ್ ಶಾಬಾದಿ ಸೇರಿದಂತೆ ಅನೇಕರು ಇದ್ದರು.