ವನವಾಸಿ ಕಲ್ಯಾಣ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ

0
19

ಸುರಪುರ: ವನವಾಸಿ ಕಲ್ಯಾಣ ಸಂಘಟನೆ ವತಿಯಿಂದ ತಾಲೂಕಿನ ಲಕ್ಷ್ಮೀಪುರದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಶ್ರೀಗಿರಿ ಮಠದ ಆವರಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ನಡೆಸಲಾಯಿತು.

ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದದಿಂದ ನಡೆದ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅನೇಕ ಮುಖಂಡರು,ವನವಾಸಿ ಕಲ್ಯಾಣ ಸಂಘಟನೆಯು ಅನೇಕ ವರ್ಷಗಳಿಂದ ನಾಡಿನ ಎಲ್ಲಾ ಅತೀ ಹಿಂದುಳಿದ ಸಮುದಾಯಗಳ ಅಭೀವೃಧ್ಧಿಗಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದು,ಇಂದು ಜಿಲ್ಲೆಯಲ್ಲಿನ ವನವಾಸಿ ಕಲ್ಯಾಣ ಸಂಘಟನೆಯ ಯುವಕರಿಗಾಗಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಕರ ದೈಹಿಕ ಮಾನಸಿಕ ಮತ್ತು ಆರೋಗ್ಯದ ವೃದ್ಧಿಗಾಗಿ ಒತ್ತು ನೀಡಲಾಗಿದೆ ಎಂದರು.

Contact Your\'s Advertisement; 9902492681

ಎಲ್ಲಾ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಯಾವುದೇ ರೀತಿಯ ವಿವಾದಗಳಿಗೆ ಅವಕಾಶ ನೀಡದೆ ಕ್ರೀಡಾ ಮನೋಭಾವನೆಯನ್ನು ಗಮನದಲ್ಲಿಟ್ಟುಕೊಂಡು ಸ್ನೇಹ ಸೌಹಾರ್ಧತೆಯಿಂದ ಆಟವಾಡಿ ಕ್ರೀಡಾ ಮನೋಭಾವನೆಯನ್ನು ಮೆರೆಯುವಂತೆ ತಿಳಿಸಿದರು.

ನಂತರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಹೆಮನೂರ ಲಕ್ಷ್ಮೀಪುರ ಲಿಂಗದಳ್ಳಿ ತೋಳದಿನ್ನಿ ದೇವಪುರ ಗ್ರಾಮಗಳ ಕ್ರೀಡಾಪಟುಗಳು ಭಾಗವಹಿಸಿ ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ತಮ್ಮ ಆಟವನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ದೊರೆ ಆಲ್ದಾಳ ವೆಂಕಟೇಶ ಬೇಟೆಗಾರ ಕಾಶಪ್ಪ ದೊರೆ ಯಾದಗಿರಿ ಸಿದ್ದಣ್ಣ ವೆಂಕಟೇಶ ಹೆಮನೂರ ಶರಣು ನಾಯಕ ಹಣಮಂತ್ರಾಯ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here