ಗೌಡ ಪ್ರಶಸ್ತಿಗೆ ಪ್ರಭುಶ್ರೀ ತಾಯಿ, ಡಾ. ಹೊಸಮನಿ, ಪತ್ರಕರ್ತ ಬಾಲಾಜಿ ಸೇರಿ ಹಲವರು ಆಯ್ಕೆ

0
104

ಕಲಬುರಗಿ: ತಾಲ್ಲೂಕಿನ ಪಾಳಾ ಸುಭಾಷಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ್ ಟ್ರಸ್ಟ್ ವತಿಯಿಂದ ಕೊಡಮಾಡುವ ನಾಲ್ಕನೇ ವರ್ಷದ ಗೌಡ ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ಕನ್ನಡ ಭವನದಲ್ಲಿ ಡಿಸೆಂಬರ್ ೨೭ರಂದು ಬೆಳಿಗ್ಗೆ ೧೦-೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಹೊಸಮನಿಅವರಿಗೆ ಚಿನ್ನದ ಪದಕ ಹಾಗೂ ಅಕ್ಕಮಹಾದೇವಿ ಆಶ್ರಮದ ಪ್ರಭುದೇವ್ ಆಶ್ರಮದ ಪ್ರಭುಶ್ರೀ ತಾಯಿ ಅವರಿಗೆ ಬೆಳ್ಳಿ ಪದಕದೊಂದಿಗೆ ಗೌಡ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿಕೆಯಲ್ಲಿ ಘೋಷಿಸಿದ್ದಾರೆ.

Contact Your\'s Advertisement; 9902492681

ಪತ್ರಕರ್ತರಾದ ಬಾಲಾಜಿ ಜೆ. ಚಿತ್ತೇಕರ್, ಶಂಕರ್ ಕೋಡ್ಲಾ, ಜಯತೀರ್ಥ ಪಾಟೀಲ್, ಸಾಹಿತಿಗಳಾದ ಡಾ. ಎಸ್.ಎಸ್. ಗುಬ್ಬಿ, ರತ್ನಾ ಕಾಳೇಗೌಡ, ಡಾ. ನಾಗಪ್ಪ ಗೋಗಿ, ಜೇವರ್ಗಿಯ ಶಮಸುದ್ದೀನ್ ಗುಂಡಗುರ್ತಿ, ವೀರೇಶ್ ಕಂದಗಲ್ ಹಾಗೂ ಬಸವರಾಜ್ ಮಾಹೂರ್, ಪ್ರಶಾಂತ್ ಗೋಲ್ಡ್ ಸ್ಮಿತ್ ಅವರೆಲ್ಲರಿಗೂ ಬೆಳ್ಳಿ ಪದಕದೊಂದಿಗೆ ಗೌಡ ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದೇ ವೇಳೆಯಲ್ಲಿ ಕಲ್ಯಾಣದ ಕಣ್ಮಣಿ, ಅವಿಸ್ಮರಣೀಯರು, ಗೌಡ ಕೃತಿಗಳ ಲೋಕಾರ್ಪಣೆ ಸಮಾರಂಭ ಸಹ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here