ಕಲಬುರಗಿ: ನಗರದ ಹಿಂದಿ ಪ್ರಚಾರ ಸಭಾದಲ್ಲಿ ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ದಳ ಸಂಘಟನೆವತಿಯಿಂದ ಅಂತರರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಿನಾಚರಣೆ ನಿಮಿತ್ತ ನಿವೃತ್ತ ಎಇಇ ಸಿದ್ಧರಾಮ ಪೊಲೀಸ್ ಪಾಟೀಲ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜಶೇಖರ ಮಾಲಿ ಅವರನ್ನು ಸನ್ಮಾನಿಸಲಾಯಿತು.
ದಳದ ರಾಜ್ಯಾಧ್ಯಕ್ಷ ಡಾ. ಎ.ಎಸ್ ಭದ್ರಶೆಟ್ಟಿ, ರಾಘವೇಂದ್ರ ಭಜಂತ್ರಿ, ಪ್ರೊ. ಶಿವರಾಜ ಪಾಟೀಲ, ಗುರುಲಿಂಗಪ್ಪ ಮುಕರಂಬಿ, ಶಿವಚಂದ್ರ ಭಕರೆ, ರಾಜಶೇಖರ ಭಾವಿಮನಿ, ಪ್ರಶಾಂತ ತಡಕಲೆ, ಶಾಂತಾ ವಾಲಿ, ಕವಿತಾ ಮಳಗಿ ಇದ್ದರು.