ಕಲಬುರಗಿ: ಮಂಗಳೂರಿನ ಉಜೇರಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ಖಂಡಿಸಿ, ಎಸ್.ಡಿ.ಪಿ.ಐ ಕಾರ್ಯಕರ್ತರು ನಗರದ ಟಿಪ್ಪು ಸುಲ್ತಾನ್ ಚೌಕ್ ಹತ್ತಿರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಾಕಿಸ್ತಾನ ಪರ ಘೋಷಣೆ ಕೂಗಿ ಜನರಲ್ಲಿ ಆತಂಕ ಮೂಡಿಸು ಕೃತ್ಯ ನಡೆಸಿ, ಹಿಂದೂ ಮುಸ್ಲಿಂಮರ ವಿರುದ್ಧ ಕೋಮುವಾದದ ವಿಷ ಬಿಜ ಸೃಷ್ಠಿಸಲು ಯತ್ನಿಸಿದ ಕೀಡಿಗೇಡಿಗಳ ವಿರುದ್ಧ ಕಠಿ ಕ್ರಮಕೈಗೊಳಬೇಕು ಮತ್ತು ಇಂತಹ ವಿಕೃತ ಕೃತ್ಯದ ಹಿಂದೆ ಕಾಣದ ಕೈಗಳಾದ ಸಂಘ ಪರಿವಾರದ ಕೈವಾಡ ವಿದ್ದು, ತಕ್ಷಣ ಸೂಕ್ತ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮಕೈಗೊಳಬೇಕೆಂದು ಪ್ರತಿಭಟನಾ ನಿರತ ಕಾರ್ಯಕರ್ತರು ಆಗ್ರಹಿಸಿದರು.
ಈ ವೇಳೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಸೈಯದ್ ದಸ್ತೇಗಿರ್, ಡಾ. ರಿಜ್ವಾನ್ ಅಬ್ದುಲ್ ರಹೀಮ್ ಪಟೇಲ, ಮೊಹಮ್ಮದ್ ಮೋಹಸಿನ್ ಸೇರಿದಂತೆ ಮುಂತಾದ ಕಾರ್ಯಕರ್ತರು ಇದ್ದರು.