ರಾಜ್ಯ ಮಟ್ಟದ ಸುವರ್ಣಶ್ರೀ ಪ್ರಶಸ್ತಿಗೆ ವೆಂಕಟೇಶ ಜನಾದ್ರಿ ಆಯ್ಕೆ

0
184

ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರ ಶ್ರೀ ಭತ್ತದ ಮರಿಯಪ್ಪ ಕನಕಗಿರಿ ಇವರ ಸ್ಮರಣಾರ್ಥವಾಗಿ ಕೊಡಮಾಡುವ ರಾಜ್ಯಮಟ್ಟದ ಸುವರ್ಣಶ್ರೀ ಪ್ರಶಸ್ತಿಗೆ ಇಲ್ಲಿನ ವೆಂಕಟೇಶ ಜನಾದ್ರಿ ಅವರು ಆಯ್ಕೆಯಾಗಿದ್ದಾರೆ.

ಫೆ. ೨೭ರಂದು ಕನಕಗಿರಿಯಲ್ಲಿ ನಡೆಯುವ ಗಜಲ್ ಉತ್ಸವ-೨೦೨೧ ಹಾಗೂ ಭತ್ತದ ಮರಿಯಪ್ಪ ಚಳವಳಿ ಮತ್ತು ಅವರ ಬದುಕಿನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜನಾದ್ರಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀಮತಿ ಭತ್ತದ ಸಿದ್ಧಲಿಂಗಮ್ಮ ಬಸೆಟ್ಟೆಪ್ಪ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಭತ್ತದ ಶರಣಪ್ಪ ಮರಿಯಪ್ಪ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here