ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಸೇರ್ಪಡೆ

2
119

ಕಲಬುರಗಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ನಾಯವಾದಿ ತಾಹಿರ್ ಹುಸೇನ್ ಹಾಗೂ ವೆಲ್ಫೇರ್ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ನೇತೃತ್ವದಲ್ಲಿ ಪ್ರಕಾಶ್ ಪಾಟೀಲ್ ಅಧ್ಯಕ್ಷರು ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ಪೀಠ ಮತ್ತು ಅವರ ಅಪಾರ ಬೆಂಬಲಿಗರೋದ್ದಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಕಲಬುರಗಿಯಲ್ಲಿ ಸೇರ್ಪಡೆಯಾದರು.

ನಗರದ ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷವನ್ನು ಸೇರ್ಪಡೆ ಮಾಡಲಾಯಿತು ಈ ಸಂದರ್ಭದ ಪಕ್ಷದ ರಾಜ್ಯ ಅಧ್ಯಕ್ಷರಾದ ನ್ಯಾಯವಾದಿ ತಾಹಿರ್ ಹುಸೇನ್ ಅವರು ಮಾತನಾಡಿ,ನಾವು ಸಕಾರಾತ್ಮ ಚಿಂತನೆಗಳನ್ನು ಬೆಳೆಸಿಕೊಂಡು ರಾಜಕೀಯ ಕ್ಷೇತ್ರವನ್ನು ಮೌಲ್ಯಾಧಾರಿತವಾಗಿ ಕಟ್ಟಿ ಬೆಳೆಸೋಣ ಎಂದ ಅವರು ಪ್ರತಿಯೊಬ್ಬನಿಗೂ ರಾಜಕೀಯದ ಬಗ್ಗೆ ಗೊತ್ತು ಗುರಿ ಇರಬೇಕು.

Contact Your\'s Advertisement; 9902492681

ಸರಕಾರಿ ನಿವೃತ್ತ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

ಆಗ ಮಾತ್ರ ನಮ್ಮ ನಾಡನ್ನು ಭ್ರಷ್ಟಾಚಾರಿಗಳ ಕಪಿಮುಷ್ಠಿಯಿಂದ ಪಾರು ಮಾಡಲು ಸಾಧ್ಯ. ಯಾವುದೇ ಸರಕಾರಗಳು ತಪ್ಪೆಸೆಗಿದಾಗ ತಿದ್ದುವ ಕೆಲಸ ಪ್ರಜೆಗಳಿಂದ ಆಗಬೇಕಾಗಿದೆ. ನಾವು ಹತಾಶ ಮನೋಭಾವ ಬಿಟ್ಟು ಸಕ್ರಿಯವಾಗಿ ಕೆಲಸ ಮಾಡೋಣ, ರಾಜಕೀಯ ಬದ್ಧತೆಯಿಂದಲೇ ಸರಕಾರಗಳೆಸಗುವ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿದೆ ಎಂದು ಕಾರ್ಯಕರ್ತರಿಗೆ ಅವರು ಸಲಹೆ ನೀಡಿದರು.

ಬದಲಾವಣೆಗಳ ಬಗ್ಗೆ ನಾವು ಆಶಾವಾದಿಯಾಗೋಣ, ಕೆಟ್ಟ ಪರಿಸ್ಥಿತಿ ಶಾಶ್ವತವಲ್ಲ. ನಾವು ನಿರಂತರ ಉತ್ತಮ ವಾತಾವರಣಕ್ಕಾಗಿ ಶ್ರಮಿಸಬೇಕಿದೆ. ವೆಲ್ಫೇರ್ ಪಾರ್ಟಿ ಇಂಡಿಯಾದ ಉದ್ದೇಶವೇ ಇದಾಗಿದ್ದು, ಸಮಾಜದಲ್ಲಿ ಸಕಾರಾತ್ಮಕ, ರಚನಾತ್ಮಕ ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸುತ್ತಿದೆ. ಸಮಾಜದ ಸುಧಾರಣೆಗಾಗಿ ಬಲಿಷ್ಠವಾಗಿ ಹೋರಾಟ ನಡೆಸುತ್ತಿದೆ. ಯಾಕೆಂದರೆ ದೇಶದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದ ಬದುಕುವ ಪರಿಸ್ಥಿತಿ ಇರಬೇಕೆಂಬುದು ನಮ್ಮ ಆಶಾಭಾವನೆಯಾಗಿದೆ ಎಂದು ಹೇಳಿದರು.

ದೇಶದಲ್ಲಿನ ದಲಿತರ ಸ್ಥಿತಿ ಚಿಂತಾಜನಕವಾಗಿದೆ ಹೋರಾಟಕ್ಕೆ ಮುಂದಾಗೋಣ: ಕಟ್ಟಿಮನಿ

ನಾಡಿನ ಕಾಳಜಿ ಇರುವ ಯವಕರು ರಾಜಕೀಯಕ್ಕೆ ಬರಬೇಕು. ಇಂದಿನ ರಾಜಕೀಯ ಪಕ್ಷಗಳಿಗೆ ನೈತಿಕತೆ ಇಲ್ಲ. ರೈತರ ಹಾಗೂ ಬಡವರ ಬಗ್ಗೆ ಕಾಳಜಿ ಇಲ್ಲ. ಕೇವಲ ಜಾತಿ ಮತ್ತು ಹಣದಿಂದ ರಾಜಕೀಯ ಮಾಡಲಾಗುತ್ತಿದೆ. ಯುವಕರು ಜಾಗತರಾದರೆ ದೇಶ ಸರ್ವತೋಮುಖ ಅಭಿವದ್ಧಿ ಸಾಧಿಸುವುದರಲ್ಲಿ ಅನುಮಾನವಿಲ್ಲ.

ಪ್ರಸ್ತುತ ರಾಷ್ಟೀಯ ಪಕ್ಷಗಳು ಜನರ ನಂಬಿಕೆ ಕಳೆದುಕೊಂಡಿವೆ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವೆಲ್ಫೇರ್ ಪಾರ್ಟಿ ಮೌಲ್ಯಾಧಾರಿತ ರಾಜಕೀಯ ಸೇವೆ ರಾಜ್ಯದ ಜನತೆಗೆ ನೀಡಲಿದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ಹೇಳಿದರು.

ಶ್ರೀ ಪರಮ ಪೂಜ್ಯ ಸಫರ್ಮಾ ಶಿರೋಮಣಿ ಡಾಕ್ಟರ್ ಅಪ್ಪಾರಾವೋ ಮುತ್ತಯ್ಯ ಮಹಾರಾಜ್ ರವರು ಮಾತನಾಡಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಮೌಲ್ಯಾಧಾರಿತ ರಾಜಕೀಯವನ್ನು ಮರು ಸ್ಥಾಪನೆ ಮಾಡಲು ಬಂದಿದೆ ಇಂತಹ ಪಕ್ಷವನ್ನು ಬಳಪಡಿಸಬೇಕು,ಮುಂದಿನ ದಿನಗಳಲ್ಲಿ ಈ ಪಕ್ಷ ಇನ್ನು ಹೆಚ್ಚಾಗಿ ಬೆಳೆಯಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಸಲೀಮ್ ಚಿತಾಪುರಿ, ಜಿಲ್ಲಾ ಉಪಾಧ್ಯಕ್ಷರು ಸಿದ್ದಣ್ಣ ಚಕ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಬೀನ್ ಅಹ್ಮದ್, ಸಲೀಂ ಸದರಿ ನಗರ ಘಟಕ ಕಾರ್ಯದರ್ಶಿ ಅಫ್ಜಲ್ ಖಾನ್ ಪಕ್ಷದ ಮುಖಂಡರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here