ಕಲಬುರಗಿ: ಕಲ್ಯಾಣ ಕರ್ನಾಟಕದ ಕೈಮಗ್ಗ ಹಾಗೂ ಜವಳಿ ಕ್ಷೇತ್ರದ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಕೈಮಗ್ಗ ನೇಕಾರರ ಮಹಾಸಭಾ ಸಂಚಾಲಕ ಹಾಗೂ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಬರುವ ಬಜೆಟ್ನಲ್ಲಿ 1100 ಕೋಟಿ ನೇಕಾರರ ಅಭಿವೃದ್ಧಿಗೆ ಘೋಷಣೆ ಮಾಡಬೇಕೆಂದು ಒತ್ತಯಿಸಿದ ಅವರು ಮಹಾರಾಷ್ಟ್ರ ದಲ್ಲಿ ನೇಕಾರರಿಗೆ ಮೀಸಲಾತಿ ನೀಡಿದಂತೆ, ರಾಜ್ಯದಲ್ಲಿಯೂ 3% ಎಸ್ಬಿಎಸ್ ವಿಷೇಶ ಹಿಂದುಳಿದ ಜನಾಂಗ ಎಂದು ಪರಿಗಣಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.