ಸುರಪುರ: ಬೆಂಕಿ ತಗುಲಿ ಗುಡಿಸಲು ಭಸ್ಮ

0
44

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ದೇವಿಂದ್ರಪ್ಪ ತಿಮ್ಮಯ್ಯ ಕನ್ನೆಳ್ಳಿ ಎಂಬುವವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿದ್ದು,ಗುಡಿಸಲಲ್ಲಿ ೨೦ ಸಾವಿರ ರೂಪಾಯಿ ನಗದು ಹಾಗು ಜೋಳ ಸಜ್ಜೆ ಸೇರಿದಂತೆ ಅಗತ್ಯ ವಸ್ತುಗಳು ಮತ್ತು ಬಟ್ಟೆ ಬರೆ ಸುಟ್ಟಿರುವುದಾಗಿ ತಿಳಿದುಬಂದಿದೆ.

Contact Your\'s Advertisement; 9902492681

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಅಪಾರ ಪ್ರಮಾಣ ಸ್ಲಾಸ್ಟಿಕ್ ವಸ್ತುಗಳು ನಾಶ

ಈ ದೇವಿಂದ್ರಪ್ಪ ತಿಮ್ಮಯ್ಯ ಕನ್ನೆಳ್ಳಿ ಮಾತನಾಡಿ,ಬಡತನದಲ್ಲಿ ಸಾಲಮಾಡಿ ಗುಡಿಸಲು ಹಾಕಿಕೊಂಡು ನಾನು ಮತ್ತು ನಮ್ಮ ಅಳಿಯನ ಕುಟುಂಬವು ಇದರಲ್ಲಿ ವಾಸ ಮಾಡುತ್ತಿದ್ದೇವು,ಆದರೆ ಈಗ ಗುಡಿಸಲೆ ಸುಟ್ಟಿರುವುದರಿಂದ ಬದುಕು ಬೀದಿಗೆ ಬಿದ್ದಿದೆ ಸರಕಾರ ನಮ್ಮತ್ತ ಗಮನಹರಿಸಿ ನೆರವು ನೀಡಬೇಕೆಂದು ಅಂಗಲಾಚಿದ್ದಾರೆ.ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here