ಹೊಟ್ಟೆ ನೋವಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

0
43

ಯಾದಗಿರಿ: ಹೊಟ್ಟೆನೋವು ತಾಳದೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರಪುರ ನಗರದ ಕುಂಬಾರಪೇಟೆಯ ಎಪಿಎಮ್‌ಸಿ ಮಾರುಕಟ್ಟೆ ಬಳಿಯಲ್ಲಿ ನಡೆದಿದೆ.

ನಜೀರ್ ತಂದೆ ಅಲಿಸಾಬ್ ಎಂಬುವ ೫೫ ವರ್ಷದ ವ್ಯಕ್ತಿ ಕಳೆದ ಅನೇಕ ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ, ಇಂದು ಕೂಡ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆದರೆ ಮದ್ಹ್ಯಾನ ತನ್ನ ಮಗನಿಗೆ ಹುಷಾರಿಲ್ಲದ ಕಾರಣ ಮಗನನ್ನು ಹೆಂಡತಿ ಬೇಗಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ,ಇದೇ ಸಮಯಕ್ಕೆ ಮನೆಯಲ್ಲಿ ನಜೀರ್ ನೇಣು ಬಿಗಿದುಕೊಂಡಿದ್ದಾನೆ.

Contact Your\'s Advertisement; 9902492681

ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಮೃತನ ಪತ್ನಿ ಬೇಗಂ ಮನೆಯಲ್ಲಿ ಹಣ ಬಿಟ್ಟು ಹೋಗಿದ್ದು ತೆಗೆದುಕೊಂಡು ಹೋಗಲೆಂದು ಮನೆಗೆ ಮರಳಿ ಬಂದು ನೋಡುವಷ್ಟರಲ್ಲಿ ನಜೀರ್ ನೇಣಿಗೆ ಶಸರಣಾಗಿದ್ದ ಎಂದು ಮೃತನ ಪತ್ನಿ ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here