ಆರೋಗ್ಯವಂತ ಜೀವನ ನಡೆಸಲು ವಿದ್ಯಾರ್ಥಿಗಳಿಗೆ  ಡಾ. ಸಾಮುಲ್ ಸಲಹೆ

0
61

ಕಮಲಾಪೂರ: ಪಟ್ಟಣದಕಾಲೇಜು ವಿದ್ಯಾರ್ಥಿನಿಯರಿಗೆ ಆರೋಗ್ಯ ರಕ್ಷಣೆ ಹೇಗೆ ಕಾಪಾಡಿಕೊಂಡು ಹೋಗಬೇಕು ಹಾಗೆ ಸಾಂಕ್ರಾಮಿಕ ರೋಗದಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಮತ್ತು ಕ್ಷಯ ರೋಗವು ವಿದ್ಯಾರ್ಥಿಗಳಲ್ಲಿ ಹೆಚ್ಚು ಹರಡತ್ತದೆ ಏಕೆಂದರೆ ರೋಗ  ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸರಿಯಾಗಿ ತಿಂಡಿ/ ಊಟ ಮಾಡದೆ ಕಾಲಿ ಹೊಟ್ಟೆಯಲ್ಲಿ ಶಾಲಾ / ಕಾಲೇಜಿಗೆ ಬರುವುದು ಕಂಡುಬರುತ್ತದೆ ಹಾಗೆ ವಿದ್ಯಾರ್ಥಿಗಳು ಈ ಕ್ಷಯ ರೋಗ ಮಾಹಿತಿ ಪಡೆದು ಬೇರೆಯವರಿಗೆ ತಿಳುವಳಿಕೆನೀಡಲು ಮಾದರಿಯಾಗಬೇಕು, ಕೆಲ‌ ಕ್ಷಯ ರೋಗಿಗಳು ಕಾಳಂಕ ತಾರತಮ್ಯ ಇಲ್ಲದೆ ಸಮಾಜದಲ್ಲಿ ಬದುಕಬಹುದು ಮುಖ್ಯವಾದದ್ದು ಆರೋಗ್ಯ. ಕ್ಷಯ ರೋಗ ಪರೀಕ್ಷೆ ಮಾಡಿಸಿಪತ್ತೆ ಹಚ್ಚುವಬಹುದು ಹಾಗೆ ಸೂಕ್ತ ಚಿಕಿತ್ಸೆಯಿಂದ ಬೇಗ ಗುಣ ಮುಖರಾಗ ಬಹುದು ಹಾಗೆ ಕ್ಷಯ ಮುಕ್ತ ಮಾಡಲು ವಿದ್ಯಾರ್ಥಿಗಳು ಪಣ ತೋಡೊಣ ಎಂದು.ಆಡಳಿತ ವೈದ್ಯ ಅಧಿಕಾರಿ ಡಾ. ಸಾಮುವೆಲ್ ಜಯಕುಮಾರ ಸಲಹೆ ನಿಡಿದರು.

ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯಿಂದ ಗುಣ ಮುಖರಾದವರು ನಮ್ಮೊಂದಿಗೆ ಸಹಜ ಜೀವನ ನಡೆಸುತ್ತಿದ್ದರೆ ಹಾಗೆ ಕಾಲೇಜು ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮದಿಂದ ತಮ್ಮಆರೋಗ್ಯದ ಕಡೆ ಲಕ್ಷ ವಹಿಸಬಹುದು ಹಾಗೆ ಕಾರ್ಯಕ್ರಮದ ಉದ್ದೇಶ ನಿಮ್ಮ ಕುಟುಂಬದ ಸದಸ್ಯರಿಗೆ ಇಂತಹುದೇ ಕ್ಷಯ ರೋಗದ ಲಕ್ಷಣ ಕಂಡು ಬಂದರೆ. ಸೂಕ್ತ ಚಿಕಿತ್ಸೆನೀಡಿ ಟಿಬಿಸದ್ಯ ಚಿಕಿತ್ಸೆ ಪಡೆದುಕೊಳ್ಳುವಂತ ಕ್ಷಯ ರೋಗಿಳುಯಾರೆ ಇರಲಿ ಮಾನವೀಯತೆ ತೋರಿಸಬೇಕು.ಟಿ ಬಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ ಎಲ್ಲಾ ಸರ್ಕಾರಿ ಆಸ್ಪತ್ರೆ ಕಫ ಪರೀಕ್ಷೆ ಮತ್ತು ಮಾತ್ರೆ ಉಚಿತವಾಗಿ ನೀಡಲಾಗುತ್ತದೆ, ಎಂದು ಹೇಳಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪಕ್ಷಾತೀತ ಹೋರಾಟಕ್ಕೆ ಕೋರ ಕಮಿಟಿ ಸಭೆ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕೀಯರ ಕಲಾ ಮತ್ತು ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ.ಜಿಲ್ಲಾ ಪಂಚಾಯತ್  ಕಲಬುರಗಿ , ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕೇಂದ್ರ ಕಲಬುರಗಿ.ಹಾಗೂ ಸರ್ಕಾರಿ ಬಾಲಕೀಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಕಮಲಾಪೂರ ಇವರ ಸಂಯುಕ್ತಶ್ರಾಯದಲ್ಲಿ. ಕಾಲೇಜು ವಿದ್ಯಾರ್ಥಿಗಳಿಗೆ ವಿಶ್ವ ಕ್ಷಯ ರೋಗ ದಿನ ಅಂಗವಾಗಿ ಗಿಡಕ್ಕೆನೀರು ಊಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಜಿ ಪಿ ಭೂಸಾಳೆ, ಮಾತನಾಡಿದರು. ಹಾಗೆ ವೇದಿಕೆ ಮೇಲೆ ಜಿಲ್ಲಾ ಡಿ ಆರ್  ಸಕ್ಷಮ್ ಅಪ್ತ ಸಮಾಲೋಚಕ ಮಂಜುನಾಥ ಕಂಬಾಳಿಮಠ ಅವರು ಪ್ರಸ್ಥಾವಿಕ ನುಡಿ ಮಾತನಾಡುತ್ತ ಕ್ಷಯರೋಗ ಮುಕ್ತವಾಗಿಸಲು ಭಾರತ ಸರ್ಕಾರದ ಘೋಷಣೆ ಪ್ರತಿ ಒಂದು ಮನೆಯಲ್ಲಿ  ಕ್ಷಯ ರೋಗಿ ತಪ್ಪದೆ  ಡಾಟ್ಸ್ ಸೆಂಟರ್‌ಗೆ ಬಂದು ಉಚಿತ ಚಿಕಿತ್ಸೆ ಇದೆ.  ಹಾಗೆ ಇದೆ ತಿಂಗಳು 24 ರಂದು ವಿಶ್ವ ಕ್ಷಯ ರೋಗ ದಿನವನ್ನಾಗಿ ಆಚರಿಸಲಾಗುತ್ತದೆ.

ಅಸ್ಪ್ರಶ್ಯತೆ ಕುರಿತು ಬೀದಿ ನಾಟಕಕ್ಕೆ ಗ್ರಾಪಂ ಅಧ್ಯಕ್ಷೆ ಸಾಹೇರಾ ಬಾನು ಚಾಲನೆ

ಅದರಅಂಗವಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ರಸಪ್ರಶ್ನೆ  ಇಡಲಾಗಿದೆ.ಅದರಲ್ಲಿ ಭಾಗವಹಿಸಿದವರಿಗೆ ಸೂಕ್ತ ನಗದು ರೂಪದಲ್ಲಿ ಕೊಡಲಾಗುತ್ತಿದೆ ಎಂದು ಹೇಳಿದರು ಹಾಗೆ ಪ್ರತಿ ಒಬ್ಬರು ಎರಡೂ ವಾರಕಿಂತ ಹೆಚ್ಚು ಕೆಮ್ಮುರಾತ್ರಿ ವೇಳೆ, ಜ್ವರ, ತೂಕಕಡಿಮೆಅಗುವಲಕ್ಷಣಕಂಡು ಬಂದಲ್ಲಿ ತಪ್ಪದೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸ ಪಡೆದು.ಕ್ಷಯ ರೋಗ ನಿರ್ಮೂಲನೆ ಮಾಡಲು ಕೈ ಜೋಡಿಸಿ ಎಂದು ಹೇಳಿದರು.

ವೇದಿಕೆ ಮೇಲೆ ಪ್ರಮುಖರಾದ ಎಸ್ ಟಿ  ಎಸ್   ಶಿವಕುಮಾರ ಪಾಟೀಲ್ ಅವರು ಕ್ಷಯರೋಗ ಕುರಿತು ಕ್ವಿಜ್ ಕಂಪಾಟೇಶನ್ ನಡೆಸಿ ಕೊಟ್ಟರು, ಎಲ್ ಹೆಚ್ ವಿ ತಂಗಮಣಿ. ಹಿರಿಯ ಆರೋಗ್ಯ ಸಹಾಯಕ ಪಂಡರಿನಾಥ ಪೂಜಾರಿ, ಪ್ರೋ ಡಾ. ಕವಿತಾ, ಪ್ರೋ ಶಿವಯೋಗಪ್ಪ , ಪ್ರೊಶಶಿಧರ್ ಭೂಸನೂರ ,ಪ್ರೋ ಸುನಿಲ್ ಕುಮಾರ ಎಂ ಎಸ್.ಪ್ರೋ ಸಂತೋಷ, ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರ ಆರಂಭಿಸಲು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಕ್ಷಯ ರೋಗ ಕುರಿತು ರಸ ಪ್ರಶ್ನೆ ಏರ್ಪಡಿಸಲಾಗಿತ್ತು ಇದರಲ್ಲಿ ಪ್ರಥಮ , ದೃತೀಯ, ತೃತೀಯ ಬಹುಮಾನ ನಗದು ರೂಪದಲ್ಲಿ ನೀಡಲಾಯಿತು.

ಇದೆ ಸಂಧರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು.ಪ್ರೋ ಶಶಿಧರ್  ಸ್ವಾಗತಿಸಿದರು, ಪಂಡರಿನಾಥ  ನಿರೂಪಿಸಿದರು. ಪ್ರೋ ಸುನಿಲ್, ವಂದಿಸಿದರು.ವಿದ್ಯಾರ್ಥಿಗಳು ಮತ್ತು ಆರೋಗ್ಯಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here