ತಳಮಟ್ಟದಿಂದಲೇ ಬೆಳೆದು ಜನನಾಯಕರಾಗಿದ ಮಾಜಿ ಶಾಸಕ ವಾಲ್ಮೀಕಿ ನಾಯಕ

0
41

ಕಲಬುರಗಿ: ತಳಮಟ್ಟದಿಂದಲೇ ಬೆಳೆದು ಜನನಾಯಕರಾಗಿ ಬೆಳೆದು ಬಂದಿದ್ದ‌ ವಾಲ್ಮೀಕಿ ನಾಯಕ ಅವರ ವ್ಯಕ್ತಿತ್ವದಲ್ಲಿಯೇ ಒಳ್ಳೆಯತನವಿತ್ತು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಇಂದು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ನುಡಿನಮನ ಮೂಲಕ ಶೃದ್ದಾಂಜಲಿ ಸಲ್ಲಿಸಿದರು.

ವಾಲ್ಮೀಕಿ ನಾಯಕ್ ಅವರು ಖರ್ಗೆ ಸಾಹೇಬರ ವಿರುದ್ದ ಹಾಗೂ ನನ್ನ ವಿರುದ್ದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ರಾಜಕೀಯವಾಗಿ ನಮ್ಮ ಹಾಗೂ ಅವರ ನಡುವೆ ಚುನಾವಣೆಗಾಗಿ ಸ್ಪರ್ಧೆ ಇರುತ್ತಿತ್ತು. ಆದರೆ ವೈಯಕ್ತಿಕವಾಗಿ ನಾವು ಪರಸ್ಪರರನ್ನು ಗೌರವಿಸಿ ವಿಶ್ವಾಸದಿಂದಲೇ ಮಾತನಾಡುತ್ತಿದ್ದೆವು. ಅಭಿವೃದ್ದಿ ಕುರಿತಂತೆ ಚರ್ಚಿಸುತ್ತಿದ್ದೆವು ಎಂದು ತಿಳಿಸಿದರು.

Contact Your\'s Advertisement; 9902492681

ಮಾಸ್ಕ್ ಧರಿಸದೇ ಓಡಾಡುವವರಿಗೆ ಪೌರಾಯುಕ್ತರಿಂದ ದಂಡ

ಅಭಿವೃದ್ದಿ ವಿಚಾರದಲ್ಲಿ ನನಗೆ ಸಂಪೂರ್ಣ ಸಹಕಾರ ನೀಡಿ ಹಲವು ಸಲಹೆ ನೀಡುತ್ತಿದ್ದ ವಾಲ್ಮೀಕಿ ನಾಯಕರು, ಬಿಜೆಪಿ ಪಕ್ಷವನ್ನು ಕ್ಷೇತ್ರದಲ್ಲಿ ಬಲಪಡಿಸಿದ್ದರು. ಅವರ ಅಗಲಿಕೆ‌ಯಿಂದಾಗಿ ಕೇವಲ ಬಿಜೆಪಿ ಪಕ್ಷಕ್ಕೆ ಮಾತ್ರ ಹಾನಿಯಾಗದೆ ಚಿತ್ತಾಪುರ ಕ್ಷೇತ್ರಕ್ಕೂ ಹಾನಿ ಆಗಿದೆ. ಯಾಕೆಂದರೆ, ಶಾಸಕರಾಗಿ ಅವರೂ ಕೂಡಾ ಇಲ್ಲಿ ಸೇವೆ‌ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ನಿಧನದಿಂದಾದ ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ, ಆದ ದುಃಖ ಮರೆಯುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here