ಶಾಸಕ ಬಸವರಾಜ ಮತ್ತಿಮಡು ಮಾಜಿ ಶಾಸಕ ವಾಲ್ಮೀಕಿ ನಾಯಕ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಕೆ

0
50

ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಶನಿವಾರ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿ ಶಾಸಕ ಬಸವರಾಜ ಮತ್ತಿಮಡು, ಚಿತ್ತಾಪೂರ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸುವಲ್ಲಿ ಬಹಳ ಮಹತ್ತರ ಪಾತ್ರವಹಿಸಿದವರು ವಾಲ್ಮೀಕಿ ನಾಯಕವರು. ಕಾರ್ಮಿಕ ಮುಖಂಡರಾಗಿ, ರಾಜಕೀಯ ಸಂಘಟಕರಾಗಿ ಬೆಳೆಯುತ್ತಾ, ಚಿತ್ತಾಪೂರ ಮೀಸಲು ಮತಕ್ಷೇತ್ರದ ಶಾಸಕರಾಗಿ ಅನೇಕ ಅಭಿವೃದ್ಧಿಪರವಾದ ಕೆಲಸಗಳನ್ನು ಮಾಡಿದ್ದರು.

Contact Your\'s Advertisement; 9902492681

ಮಾಸ್ಕ್ ಧರಿಸದೇ ಓಡಾಡುವವರಿಗೆ ಪೌರಾಯುಕ್ತರಿಂದ ದಂಡ

ಸಕ್ರೀಯವಾಗಿ ಬಿಜೆಪಿ ಪಕ್ಷವನ್ನು ಸಂಘಟಿಸುತ್ತ ಎಲ್ಲರಿಗೂ ಮಾದರಿಯಾಗಿದ್ದರು.ಅವರ ಅಗಲಿಕೆ ಬಿಜೆಪಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here