ಹೋದಲೂರ ಶಿವಲಿಂಗೇಶ್ವರ ಮಠÀಕ್ಕೆ ಶಂಕುಸ್ಥಾಪನೆ 31ಕ್ಕೆ

0
66

ಆಳಂದ: ತಾಲೂಕಿನ ಗಡಿಭಾಗದ ಹೋದಲೂರ ಗ್ರಾಮದ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಪ್ರಥಮ ಹಂತದ 50 ಲಕ್ಷ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಮಾ.31ರಂದು ಬೆಳಗಿನ 10:30ಕ್ಕೆ ಶಾಸಕ ಸುಭಾಷ ಗುತ್ತೇದಾರ ಅವರು ಅಡಿಗಲ್ಲು ನೆರವೇರಿಸಲಿದ್ದಾರೆ.

ಈ ಕುರಿತು ಶ್ರೀಮಠದ ಶ್ರೀ ವೃಷಭಲಿಂಗ ಮಹಾಸ್ವಾಮಿಗಳು ಹೇಳಿಕೆ ನೀಡಿದ ಅವರು, ಶ್ರೀಮಠದ ನೂತನ ಕಟ್ಟಡ ನಿರ್ಮಾಣ ಜೊತೆಗೆ ಲೋಕಪಯೋಗಿ ಕಾರ್ಯಗಳಿಗೆ ಅನುಕಲಕರ ರೀತಿಯಲ್ಲಿ ಶ್ರೀಮಠದ ವಿನ್ಯಾಸದಿಂದ ಕೂಡಿದ ಕಟ್ಟಡವನ್ನು ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಭಯಹಸ್ತ ಹಾಗೂ ಭಕ್ತಾದಿಗಳ ಸಹಕಾರದಿಂದ ಈ ಕಾರ್ಯನಡೆಯಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಅಡಿಗಲ್ಲು ಸಮಾರಂಭದ ಸಾನ್ನಿಧ್ಯವನ್ನು ನಂದಗಾಂವ ಮಠದ ಶ್ರೀ ರಾಜಶೇಖರ ಮಹಾಸ್ವಾಮಿಗಳು ವಹಿಸುವರು. ಶಾಸಕರು ಅಡ್ಡಿಗಲ್ಲು ನೆರವೇರಿಸಲಿದ್ದು, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಸೇರಿ ಈ ಭಾಗದ ಜನ ಪ್ರತಿನಿಧಿಗಳು, ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here