ಕುಂಬಾರಪೇಟೆಯ ಜಲ ಶುದ್ಧೀಕರಣ ಘಟಕಕ್ಕೆ ನಗರಸಭೆ ಅಧ್ಯಕ್ಷೆ ಭೇಟಿ

0
25

ಸುರಪುರ: ನಗರದ ಕುಂಬಾರ ಪೇಟೆಯ ಜಲಶುದ್ಧೀಕರಣ ಘಟಕಕ್ಕೆ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ಭೇಟಿ ನೀಡಿದರು.

ಈಗಾಗಲೇ ಜಲ ಶುದ್ಧೀಕರಣ ಘಟಕದಲ್ಲಿನ ವಿದ್ಯುತ್ ಮೋಟರ್ ಸುಟ್ಟಿರುವ ಕಾರಣ ನಾಲ್ಕು ದಿನಗಳ ಕಾಲ ನಗರಕ್ಕೆ ನೀರು ಸರಬರಾಜು ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದ ಬೆನ್ನಲ್ಲೆ ಇಂದು ಭೇಟಿ ನೀಡಿದ ಅಧ್ಯಕ್ಷರು,ನೀರು ಸರಬರಾಜಿನ ಏಜೆನ್ಸಿಯವರಿಗೆ ತಾಕೀತು ಮಾಡಿ,ಇನ್ನೆರಡು ದಿನಗಳಲ್ಲಿ ನಗರಕ್ಕೆ ನೀರು ಸರಬರಾಜು ಮಾಡಬೇಕು.

Contact Your\'s Advertisement; 9902492681

ಅಗಲಿದ ಮಾಜಿ ಶಾಸಕ ವಾಲ್ಮೀಕಿಗೆ ನುಡಿನಮನ 5 ರಂದು

ಬೇರೆ ಯಾವುದೇ ಸಬೂಬುಗಳನ್ನು ಹೇಳಬೇಡಿ.ಸುಟ್ಟಿರುವ ಮೋಟರ್ ರಿಪೇರಿ ಮಾಡಲು ಐದು ದಿನಗಳ ಸಮಯ ತೆಗೆದುಕೊಂಡರೆ ಜನರು ಕುಡಿಯುವ ನೀರಿನ ತೊಂದರೆ ನಿಭಾಯಿಸುವುದು ಹೇಗೆ ಎಂದು ಪ್ರಶ್ನಿಸಿದ ಅಧ್ಯಕ್ಷರು ಹಗಲಿರಳು ಕೆಲಸ ಮಾಡಿ ಮಂಗಳವಾರ ನಗರಕ್ಕೆ ನೀರು ಸರಬರಾಜು ಮಾಡಬೇಕು ಇಲ್ಲವಾದಲ್ಲಿ ನಿಮ್ಮ ಏಜೆನ್ಸಿಯ ಮೇಲೆ ಕ್ರಮಕ್ಕೆ ಮುಂದಾಗಬೇಕಾಗುವುದು ಎಂದು ಎಚ್ಚರಿಸಿದರು.

ನಂತರ ಅಲ್ಲಿಂದ ತೆರಳಿ ಶೆಳ್ಳಗಿ ಜಾಕವೆಲ್‌ಗೆ ಮತ್ತು ಮಾರ್ಗ ಮದ್ಯದಲ್ಲಿ ಕೆಲವು ಕಡೆಗಳಲ್ಲಿ ನಡೆದಿರುವ ಪೈಪಲೈನ್ ದುರಸ್ಥಿ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಇಂಜಿನಿಯರ್ ಶಾಂತಪ್ಪ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here