ಕಲಬುರಗಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಕಂದಾಯ ಸಚಿವರಾದ ಆರ್ ಅಶೋಕ್ ರವರ ಸಮಯೋಚಿತ ಮಾರ್ಗದರ್ಶನದಲ್ಲಿ ವಿವಿಧ ಪಿಂಚಣಿ ಯೋಜನೆ ಜಾರಿಗೆ ತಂದಿದ್ದಾರೆ.
ಈ ಪ್ರಯುಕ್ತ ಕಲಬುರಗಿ ತಹಸಿಲ್ದಾರ ಪ್ರಕಾಶ್ ಕುದುರಿ ಅವರ ಅದೇಶದ ಮರೆಗೆ ಇಂದು ಭೂಪಾಲ ತೆಗನೂರ ಗ್ರಾಮದಲ್ಲಿ ಗ್ರಾಮ ಲೆಕ್ಕಿಗರಾದ ಪ್ರಶಾಂತ್ ಮಡಿವಾಳ ರವರು ಮನೆ ಬಾಗಿಲಿಗೆ ಮಾಸಾಶನ, ಅರ್ಹ ಫಲಾನುಭವಿಗಳ ಮನೆಗೆ ತೆರಳಿ ಸ್ವಯಂ ಪ್ರೇರಿತ ಪಿಂಚಣಿ ಅಭಿಯಾನದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರು ಸುಶೀಲಕುಮಾರ ಶೆಳ್ಳಗಿ, ಸುಭಾಷ್ ಕೊರಬಾ,ಹನುಮಂತ ಗಾಂವರ, ಹನುಮಂತ ವಾಲಿಕಾರ ಇತರರು ಇದ್ದರು.