ಶಿಕ್ಷಣ ನಿಧಿ ಚೆಕ್‌ ಹಸ್ತಾಂತರ

0
31

ಕಲಬುರಗಿ: ನಗರದ ಶಹಾಬಜಾರನಲ್ಲಿರುವ ಶ್ರೀ ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘ ನಿಯಮಿತ ೨೦೧೯-೨೦ನೇ ಸಾಲಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ ಇವರ ಖಾತೆಗೆ ಮಹಿಳಾ ಸಹಕಾರ ಶಿಕ್ಷಕರಾದ ಇಸ್ಮಾಯಿಲ್‌ಬಿ ಕಲಬುರಗಿ ಇವರಿಗೆ ಸಂಘದ ಅಧ್ಯಕ್ಷ ಪರಮೇಶ್ವರ ಎಸ್.ಮುನ್ನೋಳ್ಳಿ, ಉಪಾಧ್ಯಕ್ಷ ಸಂತೋಷ ಕೆ.ಡೋಣಿ ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಬಸವರಾಜ ಎಸ್.ಮಲಕೂಡ, ಸಿದ್ರಾಮಪ್ಪ ಎಚ್.ಹೊದಲೂರ, ಶಿವಶಂಕರ ಎಲ್.ಜಾಧವ್, ಚನ್ನವೀರಪ್ಪ ವಿ.ಪಾಟೀಲ್, ಪ್ರಭುಲಿಂಗ ವಿ.ಗೊಬ್ಬೂರ, ವೀರೇಶ ಎಸ್.ಶೀಲವಂತ, ಶರಣಪ್ಪ ಸಿ.ದೇಗಾಂವ, ಹಣಮಂತ ಎಸ್.ಏಕಮೈಕರ್, ಲಲಿತಾಬಾಯಿ ಎಸ್.ಅಲ್ಲದ, ಶಕುಂತಲಾ ಬಿ.ಸೋಸಟ್ಟಿ ಹಾಗೂ ಸಂಘದ ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here