ನಾಪತ್ತೆಯಾಗಿದ್ದ ಯುವಕನ ಶವ ಬಾವಿಯಲ್ಲಿ ಪತ್ತೆ

0
33

ಯಾದಗಿರಿ: ಸುರಪುರ ನಗರದ ಕುಂಬಾರಪೇಟೆಯ ಹೊರವಲಯದಲ್ಲಿರುವ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಕುಂಬಾರಪೇಟೆಯ ಸೂಲಪ್ಪ ಮಂಗ್ಯಾಳ ಎಂಬ ೩೦ ವರ್ಷದ ಯುವಕ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ.ಈ ಯುವಕನಿಗೆ ಮಾತು ಬರುತ್ತಿರಲಿಲ್ಲ ಮತ್ತು ಬುದ್ಧಿ ಮಾಂದ್ಯನಿದ್ದಿದ್ದರಿಂದ ಮನೆಯವರು ಗಾಬರಿಗೊಂಡು ಮೂರು ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದರು.

Contact Your\'s Advertisement; 9902492681

ಬುಧವಾರ ಬೆಳಿಗ್ಗೆ ಕುಂಬಾರಪೇಟೆಯ ಹೊರ ವಲಯದಲ್ಲಿರುವ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ.ನಂತರ ಯುವಕನ ಶವ ಹೊರತೆಗೆಯಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here