ಟಿಎಂಸಿ ನಾಯಕಿ ವಿರುದ್ಧ ಕ್ರಮಕ್ಕೆ ಆಗ್ರಹ

0
19

ಕಲಬುರಗಿ: ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಸುಜಾತಾ ಮಪಂಡಲ್ ಖಾನ್ ಹಾಗೂ ಟಿಎಂಸಿ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಎಸ್.ಸಿ ಮೋರ್ಚಾ ಮಹಾ ನಗರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಕಡು ಬಡವರಾದ ಪರಿಶಿಷ್ಟ ಜಾತಿಯವರು ಪ್ರವೃತ್ತಿಯಿಂದ ಭಿಕ್ಷುಕರಾಗಿದ್ದಾರೆ. ಕೆಲವರು ಸಂದರ್ಭದಿಂದ ಭಿಕ್ಷುಕರಾಗಿದ್ದಾರೆ ಎಂದು ನಿಂದನೆ ಮಾಡಿದ್ದಾರೆ. ಬಂಗಾಳದಲ್ಲಿ ಪರಿಷ್ಟ ಜಾತಿ ಸಮುದಾಯದವರನ್ನು ಅವಮಾನಿಸುವ ಉದ್ದೇಶದಿಂದಲೇ ಭಿಕ್ಷುಕ ಪದ ಬಳಸಿದ್ದಾರೆ. ಇದು ಖಂಡನಾರ್ಹವಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

Contact Your\'s Advertisement; 9902492681

ಭೀಮ ರತ್ನ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಹಣಮಂತ ಇಟಗಿಗೆ ಸನ್ಮಾನ಻

ಇಂತಹ ಅವಮಾನಕರ ಹೇಳಿಕೆಗಳು ಅಂಬೇಡ್ಕರ್‌ಅವರು ಕಂಡ ಪ್ರಜಾಪ್ರಭುತ್ವದ ಚಿಂತನೆಗೆಳಿಗೆ ಅವಮಾನ ಮಾಡಿದಂತಾಗಿದೆ. ಪಶದಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ತೃಣ ಮೂಲ ಕಾಂಗ್ರೆಸ್ ಪಕ್ಷದ ಮುಖಂಡರು ಇಂತಹ ಹೇಳಿಕೆ ನೀಡುವ ಮೂಲಕ ಸಾಮಾಜಿಕ ದ್ವೇಶ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಟಿಎಂಸಿ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಎಸ್.ಸಿ ಮೋರ್ಚಾ ಮಹಾ ನಗರ ಜಿಲ್ಲಾ ಘಟಕದ ಅಧ್ಯಕ್ಷ ದೇವಿಂದ್ರ ಎಸ್.ಸಿನ್ನೂರ, ಪ್ರಧಾನ ಕಾರ್ಯದರ್ಶಿ ದಿನೇಶ ಎನ್.ದೊಡ್ಡಮನಿ, ನಗರ ಜಿಲ್ಲಾ ಉಪಾಧ್ಯಕ್ಷ ಪ್ರಲ್ಹಾದ ಹಡಗಿಲ, ನಗರ ಜಿಲ್ಲಾ ಕಾರ್ಯದರ್ಶಿ ಆನಂದ ಚಿಂಚೋಳಿ, ದಕ್ಷಿಣ ವಲಯ ಅಧ್ಯಕ್ಷ ಹಣಮಂತ ವಚ್ಚಾ, ಉತ್ತರ ವಲಯ ಅಧ್ಯಕ್ಷ ವಿಕಾಸ ಕರಣಿಕ, ಮಹಾ ನಗರ ಪಾಲಿಕೆ ಮಾಜಿ ಸದಸ್ಯ ವಿಶಾಲ ದರ್ಗಿ, ರಾಜು ವಾಡೇಕರ, ವಿಠ್ಠಲ ನೆಲೋಗಿ, ದತ್ತು ಡೀಲಾರೆ, ಸಂತೋಷ ಹಾದಿಮನಿ, ಲಕ್ಷ್ಮಣ ಮೂಲಭಾರತಿ, ತುಕಾರಾಮ, ಅಭಿ ಹಾದಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here