ಸೇಡಂ: ಬೆಂಗಳೂರಿನಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ಪತ್ರೆಯಲ್ಲಿ 50% ಬೆಡ್ ಗಳು ಮಿಸಲಿಟ್ಟಿರುವ ನಿಯಮ ಬೆಂಗಳೂರಿನ ಮಾದರಿಯಲ್ಲಿ ಕಲಬರಗಿಯಲ್ಲೂ ಜಾರಿ ಮಾಡಿ ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ದಿನೆ ದಿನೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಕಲಬುರಗಿಯ ಜಿಮ್ಸ ,ಇ ಎಸ್ ಐ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲಾ ಆದಕಾರಣ ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೊಗುತ್ತಿದ್ದು ಖಾಸಗಿ ಆಸ್ಪತ್ರೆಯವರು ಇಂಜಿಕ್ಷನ ಹಾಗೂ ಆಕ್ಸಿಜನ್. ಔಷದಿಗಳು ಪ್ರತಿಯೊಂದರಲ್ಲೂ ದುಪ್ಪಟ್ಟ ಹಣದ ಬಿಲ್ ಮಾಡಿ ಲಕ್ಷಾಂತರ ರೂಪಾಯಿ ವಸೂಲೂ ಮಾಡುತ್ತಿದ್ದು ಬಡ ಜನರು ಹಣ ವಿಲ್ಲದೆ ಖಾಸಗಿ ಸಾಲ ಹಾಗೂ ಆಭರಣ, ಆಸ್ತಿಮಾರಿ ಆಸ್ಪತ್ರೆಗಳ ಬಿಲ್ ಪಾವತಿ ಮಾಡುತ್ತಿದ್ದಾರೆ.
ಆದಕಾರಣ ಕೂಡಲೇ ಜಿಲ್ಲಾಡಳಿತ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೊವಿಡ್ ಕೇರ್ನ ಖಾಸಗಿ ಆಸ್ಪತ್ರೆಗಳಲ್ಲಿ 50% ಬೆಡ್ ಸರ್ಕಾರಿ ಕೊಟಾದಲ್ಲಿ ಮಿಸಲಿಟ್ಟು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಉಚಿತ ಚಿಕಿತ್ಸೆ ನೀಡಲು ಮುಂದಾಗಬೇಕು ಇದನ್ನೆಲ್ಲಾ ನಿರ್ವಹಣೆ ಮಾಡಲು ಹಿರಿಯ ಅಧಿಕಾರಿಗಳ ವಿಶೇಷ ತಂಡ ರಚಿಸಿ ಬಡ ಜನರ ಸಹಾಯಕ್ಕೆ ಮುಂದಾಗಬೇಕು ಎಂದು ಬಾಲರಾಜ್ ಗುತ್ತೇದಾರ ಒತ್ತಾಯಿಸಿದಾರೆ.