ಆರೋಗ್ಯ ಕವಿಗೋಷ್ಠಿ ಸ್ಪರ್ದೆಗೆ ಆಯ್ಕೆ

0
18

ಕಲಬುರಗಿ: ಕೊರೊನಾ ರೂಪಾಂತರ ೨ನೇ ಅಲೆ ಎಲ್ಲೆಡೆ ವ್ಯಾಪಿಸಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅನೇಕ ಸಾವುಗಳು ಸಂಭವಿಸುವುದನ್ನು ನೋಡುತ್ತಿದ್ದೇವೆ. ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಆಶ್ರಯದಲ್ಲಿ ಆರೋಗ್ಯ ಕುರಿತಾಗಿ ಆನ್‌ಲೈನ್ ಕವಿಗೋಷ್ಠಿ ಸ್ಪರ್ದೆ ಏರ್ಪಡಿಸಲಾಗಿತ್ತು.

ಘಟಕದ ಜಿಲ್ಲಾದ್ಯಕ್ಷ ಮಹಾಂತೇಶ ಎನ್ ಪಾಟೀಲ ಯಾತನೂರ ಅವರ ನೇತೃತ್ವದಲ್ಲಿ ’ಆರೋಗ್ಯ’ ಎಂಬ ಶಿರ್ಷಿಕೆಯಡಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಯುವ ಕವಿಗಳು, ಹಿರಿಯರು ಭಾಗವಹಿಸಿದರು. ಇವರಲ್ಲಿ ಅತ್ಯುತ್ತಮ ಮೂರು ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಮೂರು ಮೆಚ್ಚುಗೆ ಕವನಗಳೆಂದು ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಶಿಕ್ಷಕಿ ಮಹಾದೇವಿ ಅಷ್ಠಗಿ(ಪ್ರಥಮ), ಸಂಗಮ್ಮ ದರ್ಮುರಕರ (ದ್ವಿತೀಯ) ಹಾಗೂ ವಿಜಯಲಕ್ಮೀ ಗುತ್ತೇದಾರ(ತೃತೀಯ) ಸ್ಥಾನಗಳಿಗೆ ಆಯ್ಕೆಯಾದರು.

ಹಾಗೂ ಗಂಗಮ್ಮ ನಾಲವಾರ, ಭಾರತಿ ಗುತ್ತೇದಾರ, ರವಿಕುಮಾರ ನಂದಗೇರಿ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದವು. ಶಿಕ್ಷಕಿ ಮಲ್ಲಮ್ಮ ಎಸ್ ಕಾಳಗಿ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ೨೫ ಜನ ಕವಿಗಳು ಭಾಗವಹಿಸಿದರು. ಇವರ ಎಲ್ಲಾ ಕವನಗಳು ಅರ್ಥಪೂರ್ಣವಾಗಿದ್ದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here