ಕಲಬುರಗಿ: ವಾರ್ಡ್ ನಂ ೨೮ ರ ಬಸವೇಶ್ವರ ಹೊಸ ಬಡಾವಣೆಯ ಶಿವಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಕೋವಿಡ್-೧೯ ಲಸಿಕಾ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಸಂಯೋಜಕ ಹಾಗೂ ಬಿಜೆಪಿ ಉಪಾಧ್ಯಕ್ಷ ವಿಜಯಕುಮಾರ ಹುಲಿ, ಪ್ರಮುಖರಾದ ಮಲ್ಲಿನಾಥ ಬೋಳಶೆಟ್ಟಿ, ಭೀಮರಾವ ಅಕ್ಕೋಣಿ, ರಾಜಶೇಖರ ಶೀಲವಂತ ಹೆಬ್ಬಾಳ, ಗುಂಡೇರಾವ ಪಾಟೀಲ, ಸಿಎಂ ದೊಡ್ಮನಿ, ಸುಭಾಷ ಕಿರಾಣಿ, ಧರ್ಮಪ್ರಕಾಶ ಪಾಟೀಲ, ಅಶೋಖ ಇಂಡಿ, ಬಿ.ಎಸ್.ಮಾಲಿಪಾಟೀಲ, ಬಿ.ಎಸ್.ಮಟಗಿ, ರೇವಣಸಿದ್ದಯ್ಯ ಬೇಕರಿಸ್ವಾಮಿ, ಸುಭಾಷ ಮಲಶೆಟ್ಟಿ ಹಾಗೂ ಶಿವಮಂದಿರ ಕಮೀಟಿಯ ಸದಸ್ಯರು ಇದ್ದರು.