ಜೇವರ್ಗಿ: ತಾಲೂಕಿನ ಕಲ್ಲಹಂಗರಗಾ ಗ್ರಾಮದ ಶ್ರೀಲಿಂಗೇಶ್ವ ದೇವಸ್ಥಾನದಲ್ಲಿ ಜೇವರ್ಗಿ ಶಾಸಕರು ಹಾಗೂ ರಾಜ್ಯ ವಿಧಾನಸಭೆಯ ಮುಖ್ಯ ಸಚೇತಕರಾದ ಡಾ.ಅಜಯ ಸಿಂಗ್ ಅವರು ಕೊರೊನಾದಿಂದ ಗುಣಮುಖವಾಗಬೇಕು ಎಂದು ಕಲ್ಲಹಂಗರಗಾ ಗ್ರಾಮದ ಕಾಂಗ್ರೆಸ್ ಯುವ ಮುಖಂಡ ಬಾಪೂಗೌಡ ಜಿ.ಪಾಟೀಲ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸುನೀಲ ಸರ್ದಾರ, ದೊಡು ಪಾಟೀಲ, ಮಡಿವಾಳ ತಳವಾರ, ತಿಪ್ಪಣ್ಣ ಗಾದಿ, ಸಿದ್ದು ಇಟ್ಟಗಾ, ಶರಣು ಕಲಬುರಗಿ, ಶರಣು ತಳಕೇರಿ, ಆಕಾಶ ಕಲಬುರಗಿ ಇದ್ದರು.