ಎಲ್ಲರೂ ಕರೋನಾ ಲಸಿಕೆ ಹಾಕಿಕೊಳ್ಳಿ:ಪಿಎಸ್ಐ ಮಂಜುನಾಥ ರೆಡ್ಡಿ ಮನವಿ

0
45

ಚಿತ್ತಾಪುರ:ಈಗಾಗಲೇ 45 ವರ್ಷದ ಮೇಲ್ಪಟ್ಟವರಿಗೆ ಲಸಿಕೆಯನ್ನು ಕೊಡಲಾಗುತ್ತಿದೆ.ಸರ್ಕಾರದ ಆದೇಶದ ಮೇರೆಗೆ ಇಡೀ ದೇಶದಲ್ಲಿ ಮೇ-01 ರಿಂದ 18 ವರ್ಷ ಮೇಲೆ ಇರುವ ಎಲ್ಲರಿಗೂ ಲಸಿಕೆಯನ್ನು ಕೊಡಲಾಗುತ್ತಿದ್ದು ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಚಿತ್ತಾಪುರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ರೆಡ್ಡಿ ಮನವಿ ಮಾಡಿದ್ದಾರೆ.

ಅವರು ಇಂದು ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆಯನ್ನು ಪಡೆದುಕೊಂಡರು. ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ,ಕರೊನಾಗೆ ಲಸಿಕೆ ರಾಮಬಾಣವಿದ್ದಂತೆ. ಫೇಸ್ ಬುಕ್, ವಾಟ್ಸಾಪ್ ಗಳಂತಹ ಸೋಷಿಯಲ್ ಮೀಡಿಯಾದಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದಿರಿ,ಲಸಿಕೆ ತಗೆದುಕೊಳ್ಳುವದರಿಂದ ಕರೋನಾ ಸೋಂಕಿನಿಂದ ಆಗುವ ಸಾವುಗಳನ್ನು ತಡೆಯಬಹುದು ನಮ್ಮ ಠಾಣೆಯಲ್ಲಿ ಎಲ್ಲಾ ಸಿಬಂದ್ದಿಗಳು ಹಾಗೂ ನಾನು ಕೂಡ ಇಂದು ಲಸಿಕೆಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿದರು. ಕೋವಿಡ್ ಲಸಿಕೆ ಎಲ್ಲರೂ ತೆಗೆದುಕ್ಕೊಳುವ ಮೂಲಕ ದೇಶವನ್ನು ಕಾಪಾಡೋಣ ಎಂದು ತಿಳಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here