ಕಲಬುರಗಿ: ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ನಗರದ ಲಾಲಗೇರಿ ಕ್ರಾಸ್ ಬಳಿ ಗುರುವಾರ ನೀರು, ಮಜ್ಜಿಗೆ, ಬಿಸ್ಕತ್ತು, ಸಾನಿಟೈಸರ್ ವಿತರಿಸಲಾಯಿತು.
ಎಎಸ್ ಐ ರವಿ ಮುದ್ದಡಗಾ, ಸುರೇಶ ಮಲಘಾಣ, ಮುಖ್ಯ ಪೇದೆ ಚಂದ್ರಕಾಂತ ಪೋವಾಜಿ, ಸಿಬ್ಬಂದಿಗಳಾದಹಣಮಂತ, ನಾಗೇಶ, ಈರಣ್ಣ, ಜಗದೇವಿ, ರಾಜು ಹೊಸಮನಿ, ಪ್ರಮುಖರಾದ ಎಚ್.ಬಿ.ಪಾಟೀಲ, ಸುನೀಲಕುಮಾರ ವಂಟಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ, ಎಸ್.ಎಸ್.ಪಾಟೀಲ ಬಡದಾಳ, ಅಣವೀರಯ್ಯಸ್ವಾಮಿ ಇದ್ದರು.