ಬಿಜೆಪಿ ನಾಯಕರಿಂದ ಕೋಮು ದ್ವೇಷ, ಶತೃತ್ವ ಬಿತ್ತುವ ಕೆಲಸ: ಎಸ್ಎಫ್ಐ

0
193

ರಾಯಚೂರು: ಕೋವಿಡ್ ಸಂಕಷ್ಟದ ವೇಳೆ ಬಿಜೆಪಿ ಸಕಾ೯ರದ ಹೊಣೆಗೇಡಿತನದಿಂದ ಜನರು ಸಾವು ನೋವಿಗೆ ಕಾರಣವಾಗಿರುವಾಗ ಅವರ ಸಂಕಟವನ್ನು ಕೋಮುವಾದಿ ರಾಜಕೀಯ ದುರುಪಯೋಗ ಮಾಡಿಕೊಳ್ಳುವ ಹುನ್ನಾರವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಡೆಸಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷರಾದ ರಮೇಶ ವೀರಾಪೂರು ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಾರ್ ರೂಂ ನಲ್ಲಿ ಕೆಲಸ ಮಾಡುತ್ತಿರುವ 200 ಹೊರಗುತ್ತಿಗೆ ನೌಕರರಲ್ಲಿ ಕೇವಲ 17 ಜನ ಮುಸ್ಲಿಂ ಜನಾಂಗದ ನೌಕರರ ಹೆಸರನ್ನು ಮಾತ್ರ ಉಲ್ಲೇಖಿಸುತ್ತಾ ಜನತೆಯಲ್ಲಿ ಅವರ ಬಗ್ಗೆ ಅನುಮಾನ ಸೃಷ್ಟಿಸುವ ಮೂಲಕ ದ್ವೇಷ ಮತ್ತು ಶತೃತ್ವ ಬಿತ್ತುವ ಕೆಲಸದಲ್ಲಿ ಬಿಜೆಪಿ ಸಂಸದರು, ಶಾಸಕರು ನಿರತರಾಗಿದ್ದಾರೆ. ಕೆಲವು ಸಚಿವರು ಅದಕ್ಕೆ ಪುಷ್ಠಿ ನೀಡುವ ಹೇಳಿಕೆಯನ್ನು ತನಿಖೆಗೂ ಮುನ್ನ ನೀಡುತ್ತಿದ್ದಾರೆ. ವಾರ್ ರೂಂ ಜವಾಬ್ದಾರಿ ಹೊಂದಿರದ ಬಿಬಿಎಂಪಿ ಜಂಟಿ ಆಯುಕ್ತ ಸರಫರಾಜ್ ಖಾನ್ ರವರನ್ನು ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ ಗುರಿಯಾಗಿಸಲಾಗುತ್ತಿದೆ. ಬಿಜೆಪಿ ಐಟಿ ಸೆಲ್ ಮೂಲಕ ಇದನ್ನು ಹರಿಬಿಡಲಾಗುತ್ತಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ರಾಯಚೂರು ಜಿಲ್ಲಾ ಸಮಿತಿ ಖಂಡಿಸಿದೆ.

Contact Your\'s Advertisement; 9902492681

ಕೋವಿಡ್ ನಿವ೯ಹಣೆಯಲ್ಲಿ ಬಿಜೆಪಿ ಸಕಾ೯ರದ ಸಾಲು ಸಾಲು ವೈಫಲ್ಯಗಳಿಂದ ಆಕ್ಸಿಜನ್ ಸಿಗದೆ ಕೋಲಾರದಲ್ಲಿ ‌4 ಜನ , ಚಾಮರಾಜನಗರದಲ್ಲಿ 24 ಜನರ ಸಾವುಗಳು ಸಂಭವಿಸಿವೆ. ಇದೇ ರೀತಿ ರಾಜ್ಯದೆಲ್ಲೆಡೆ ಸಾವುಗಳು ಸಂಭವಿಸಿವೆ ಇದರ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕುತಂತ್ರದ ಭಾಗವಾಗಿ ಇಂತಹ ಯತ್ನವನ್ನು ಬಿಜೆಪಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ಆದರೆ ಕೆಲ ಖಾಸಗಿ ಮಾಧ್ಯಮಗಳ ತನಿಖೆಯಲ್ಲಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಈಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಜೊತೆ ವಾರ್ ರೂಂ ದಾಳಿಯ ತಂಡದಲ್ಲಿದ್ದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಸಿಕ್ಕಿಬಿದ್ದಿದ್ದಾರೆ. ಮತ್ತಷ್ಟು  ತನಿಖೆ ನಡೆದರೆ  ತೇಜಸ್ವಿ ಸೂರ್ಯನೂ ಸಿಕ್ಕಿ ಬೀಳುವ ಸಾಧ್ಯತೆ ಇದೆ. ಬಿಜೆಪಿ‌ಯವರು ಯಾವುದಕ್ಕೂ ಹೇಸದವರು ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

ಸಮಗ್ರ ನ್ಯಾಯಾಂಗ ತನಿಖೆ ನಿರಾಕರಿಸಿ ಸಿಸಿಬಿ ತನಿಖೆಗೆ ಆದೇಶಿಸುವ ಮೂಲಕ ತನ್ನ ರಾಜಕೀಯ ಕ್ಕಾಗಿ ಬೆಡ್ ಬ್ಲಾಕಿಂಗ್ ಹಗರಣ ಬಳಸಿ ಕೋಮು ವಿಭಜನೆಗೆ ಬಿಜೆಪಿ ನಡೆಸಿರುವ ಯತ್ನ ಖಂಡನೀಯ. ಐಪಿಸಿ ಕಲಂ153A ಮತ್ತು 505(2) ರಡಿ ಇವರ ಮೇಲೆ  ಎಫ್ ಐ ಆರ್ ಹಾಕಬೇಕು. ಇಡಿ ಬೆಡ್ ಬ್ಲಾಕಿಂಗ್ ಹಗರಣ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.

ಖಾಸಗಿ ಆಸ್ಪತ್ರೆ ಬೆಡ್ ದರ ಪರಿಷ್ಕರಣೆ ಎಸ್ಎಫ್ಐ ವಿರೋಧ: ಕೋವಿಡ್ ಕಾಯ೯ಪಡೆ ಅಧ್ಯಕ್ಷರಾದ ಕೂಡಲೆ ಮೊದಲ ಸಭೆಯಲ್ಲಿ ಖಾಸಗಿ ಆಸ್ಪತ್ರೆ ಬೆಡ್ ದರ ಪರಿಷ್ಕರಣೆ ಮಾಡುವಂತೆ ನಿಣ೯ಯಿಸುವ ಮೂಲಕ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ಖಾಸಗಿ ಆಸ್ಪತ್ರೆಗಳ ಲಾಭಿಯ ಹಿತಾಸಕ್ತಿ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.

ಸ್ವತಃ ವೈಧ್ಯಕೀಯ ಸಂಸ್ಥೆಯ ಮಾಲೀಕರಾದ  ಅವರಿಗೆ ಜನತೆಯ ಹಿತಕ್ಕಿಂತ ಖಾಸಗಿ ಆಸ್ಪತ್ರೆಗಳ ಹಿತವೆ ಪ್ರಧಾನವಾಗಿದೆ. ಖಾಸಗಿ ಇತಾಸಕ್ತಿಗಳ ಬಂದಿಯಾಗಿರುವ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಾಗಲೇ ಬಿಜೆಪಿ ಸಕಾ೯ರ ಖಾಸಗಿ ಲಾಭಿಗೆ ಮಣಿದಿದೆ ಎಂದು ದರ ಪರಿಕ್ಷರಣೆ ಶಿಫಾರಸ್ಸನ್ನು ಎಸ್ಎಫ್ಐ ವಿರೋಧಿಸಿದೆ.

ಅದನ್ನು ಒಪ್ಪಬಾರದೆಂದು ರಾಜ್ಯ ಸಕಾ೯ರವನ್ನು ಒತ್ತಾಯಿಸಿದೆ. ಸಕಾ೯ರಿ ಕೋಟಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ತಾರತಮ್ಯ ಮಾಡುತ್ತಿರುವ ಹಲವು ಸಂಸ್ಥೆಗಳ ಮೇಲೆ ಕ್ರಮ ವಹಿಸದೆ ಅವರಿಗೆ ದರ ಹೆಚ್ಚಳದ ಉಡುಗೊರೆ ನೀಡಲು ಬಿಜೆಪಿ ಸಕಾ೯ರ ಮುಂದಾಗಿರುವುದು ಖಂಡನೀಯವಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here