ಸೇಡಂ : ತಾಲೂಕಿನ ಗಡಿ ಗ್ರಾಮದ ಗುಂಡೇಪಲ್ಲಿಯಲ್ಲಿ ಇತ್ತಿಚ್ಚಿಗೆ ಕೊವಿಡ್ ಕೇರ್ ಆಸ್ಪತ್ರೆಯವರೊಂದಿಗೆ ನಡೆದ ಮಾತಿನ ಚಕಮಕಿಯನ್ನು ಆಧಾರಿಸಿ ಗುಂಡೇಪಲ್ಲಿ ಗ್ರಾಮಸ್ಥರ ಮೇಲೆ ಹಾಕಿರುವ ಕೆಸ್ ರದ್ದು ಮಾಡಲು ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಆಗ್ರಹಿಸಿದಾರೆ.
ಈ ಕುರಿತು ಪತ್ರಿಕಾ ಪ್ರಕಟಣೇ ಹೋರಡಿಸಿರುವ ಅವರು ಸೇಡಂ ತಾಲೂಕಿನ ಗಡಿ ಗ್ರಾಮದ ಗುಂಡೇಪಲ್ಲಿಯಲ್ಲಿ ಇತ್ತಿಚೆಗೆ ಖಾಸಗಿ ಆಸ್ಪತ್ರೆಯವರು ಕೋವಿಡ್ ಕೇರ್ ಆಸ್ಪತ್ರೆ ಪ್ರಾರಂಭಿಸಿದು ಆದರೆ ಹಳ್ಳಿ ಜನ ಈ ಆಸ್ಪತ್ರೆಯಿಂದ ಕೋರೋನಾ ಗ್ರಾಮದಲ್ಲಿ ಹರಡುತ್ತದೆ ಎಂದು ಭಯಗೊಂಡು ಗ್ರಾಮಸ್ಥರು ಸೇರಿ ಆಸ್ಪತ್ರೆಯನ್ನು ಇಲ್ಲಿಂದ ಸ್ಥಳಂತರಿಸಿ ಎಂದು ಆಗ್ರಹಿಸಿದರು.
ಇದೆ ವೇಳೆ ಮಾತಿನ ಚಕಮಕಿ ನಡೆದಿದೆ ಆದೆರೆ ಆಸ್ಪತ್ರೆಯವರು ಗ್ರಾಮಸ್ಥರ ಮೇಲೆ ಮುಧೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಾರೆ ಕೂಡಲೆ ಗ್ರಾಮಸ್ಥರ ಮೇಲೆ ಹಾಕಿರುವ ಪ್ರಕರಣ ರದು ಮಾಡಿ ಅವರಿಗೆ ಬಿಡುಗಡೆಗೋಳಿಸಬೇಕೆಂದು ಬಾಲರಾಜ ಗುತ್ತೇದಾರ ಆಗ್ರಹಿಸಿದ್ದಾರೆ.