ಸುರಪುರ: ದಿನೆ ದಿನೆ ಕೊರೊನಾ ಸೊಂಕಿನ ಪ್ರಕರಣಗಳು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಹಸನಾಪುರ ವಲಯವನ್ನು ಕಂಟೋನ್ಮೆಂಟ್ ಜೋನ್ನಾಗಿ ಪರಿವರ್ತಿಸಲಾಗಿದೆ ಎಂದು ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ,ಹಸನಾಪುರ ವಾರ್ಡ್ನಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೊಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ.ಆದ್ದರಿಂದ ಹಸನಾಪುರ ಜನರ ರಕ್ಷಣೆಯ ಉದ್ದೇಶದಿಂದ ಬೇರೆ ವಾರ್ಡ್ಗಳ ಜನರು ಸಂಚರಿಸದಂತೆ ಕೆಲ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಕೊರೊನಾ ಸೊಂಕು ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ.ಸಾರ್ವಜನರಿಕರು ಸಹಕರಿಸಬೇಕೆಂದು ಮನವಿ ಮಾಡುತ್ತೇವೆ.ಅಗತ್ಯ ವಸ್ತುಗಳು ತಮ್ಮ ವಾರ್ಡ್ನಲ್ಲಿಯೆ ಖರಿದಿ ಮಾಡುವಂತೆ ತಿಳಿಸಿದರು.
ನಗರಸಭೆ ಸದಾಕಾಲ ಜನರ ಹಿತವನ್ನು ಬಯಸುತ್ತದೆ.ಅದರಂತೆ ಹಸನಾಪುರ ವಾರ್ಡ್ನ ಜನರುಕೂಡ ಸಹಕರಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ನೆರವಾಗುವಂತೆ ವಿನಂತಿಸುವುದಾಗಿ ತಿಳಿಸಿದರು.