ಕಲಬುರಗಿ: ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಚಿತ್ತಾಪುರ ಮತಕ್ಷೇತ್ರದ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರ ಆದೇಶದ ಮೇರೆಗೆ ಕಲಬುರಗಿಯ ಕಣ್ಣಿ ಮಾರ್ಕೆಟ್ನಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂಪ್ರಭು ಪಾಟೀಲ್ ಅವರು ಬಡವರಿಗೆ ನಿರ್ಗತಿಕರಿಗೆ ಮಾಸ್ಕ್ ವಿತರಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೋನಗುಂಟಿ, ಯುವ ಕಾಂಗ್ರೆ ಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಈರಣ ಝಳಕಿ, ಮಾಜಿ ಮಹಾನರ ಪಾಲಿಕೆ ಸದಸ್ಯರಾದ ಯೂನುಸ್ ಅಲಿ ಹಾಗೂ ಶೇಖ್ ಯೂನುಸ್ ಅಲಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಮರ್ ಶಿರವಾಳ, ಪ್ರಶಾಂತ ನಾಟಿಕರ್ ಹಾಗೂ ಮುಂಖಡ ಭೀಮು ಹಿರಾಪುರ್ ಇದ್ದರು.