ಕಾಳಗಿ : ರೈತರು ಕಟ್ಟಡ ಕಾರ್ಮಿಕರು, ಕುಶಲ ಕರ್ಮಿಗಳು ಸೇರಿ ವಿವಿಧ ವರ್ಗಗಳ ಮುಖ್ಯಮಂತ್ರಿ ಪ್ರಕಟಿಸಿರುವ ಪ್ಯಾಕೇಜ್ ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಧರ್ಮರಾಜ್ ಕಲ್ಲಹಿಪ್ಪರಗಾ ಟೀಕಿಸಿದರು.
ಎರಡು ಹಾಗೂ ಮೂರು ಸಾವಿರ ರೂ ಯಾವುದಕ್ಕೂ ಸಾಲುವುದಿಲ್ಲ . ಅಲ್ಲದೆ ಹಲವಾರು ಶ್ರಮಿಕ ವರ್ಗದವರನ್ನು ಕೈ ಬೀಡಲಾಗಿದೆ. ರೈತರಿಗೆ ಕಳೆದ ವರ್ಷದ ಪ್ಯಾಕೇಜ್ ಇನ್ನೂ ಸಮರ್ಪಕವಾಗಿ ಮುಟ್ಟಿಲ್ಲ. ಮುಖ್ಯವಾಗಿ ರೈತರಿಗೆ ಸಾಲ ಸಿಕ್ಕಿಲ್ಲ. ಹೀಗಾಗಿ ಸಾಲ ನೀಡುವುದರ ಜತೆಗೆ ಎಲ್ಲರ ರೈತರಿಗೆ ಆರ್ಥಿಕ ಧನ ಸಹಾಯ ನೀಡಬೇಕು.
ಎಲ್ಲರಿಗೂ ಸಹಾಯ ಸಿಗುವಂತೆ ಆಯಾ ಇಲಾಖೆಗಳಿಂದ ಮಾಹಿತಿ ಪಡೆದು ಅವರ ಖಾತೆಗೆ ಕನಿಷ್ಟ 10 ಸಾವಿರ ರೂ. ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿದ್ದಾರೆ. ಮುಖ್ಯವಾಗಿ ಕೋವಿಡ್ ಸೋಕಿಂಗೆ ಒಳಗಾದವರು ಲಕ್ಷಾಂತರ ರೂ ಖರ್ಚು ಮಾಡಿದ್ದರೂ ಹಲವಾರು ಜನರ ಜೀವ ಉಳಿದಿಲ್ಲ . ಅಂತಹ ಕುಟುಂಬಗಳು ಬೀದಿಗೆ ಬಂದಿವೆ ಹೀಗಾಗಿ ಅಂತಹ ಕುಟುಂಬಗಳಿಗೆ 10 ಲಕ್ಷ ವಿಶೇಷ ಪ್ಯಾಕೇಜ್ ನೀಡುವುದುಅಗತ್ಯವಾಗಿದೆ.
ಬಡವರಿಗೆ ಅಕ್ಕಿಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಧರ್ಮರಾಜ್ ಒತ್ತಾಯಿಸಿದ್ದಾರೆ.