ಕಲಬುರಗಿ: ಕೋವಿಡ್ ಲಾಕ್ಡೌನ್ ಹಿನ್ನಲೆಯಲ್ಲಿ ಎಲ್ಲ ಬಿಪಿಎಲ್ ಪಡಿತರ ಚೀಟಿದಾರರಿಗೆ ಮತ್ತು ಸ್ಲಂ ನಿವಾಸಿಗಳಿಗೆ ತಲಾ ೧೦ ಸಾವಿರ ರೂ.ಗಳ ಆರ್ಥಿಕ ಪರಿಹಾರ ಹಾಗೂ ಉಚಿತ ಪಡಿತರ ಮತ್ತು ಅಗತ್ಯ ವ ಸ್ತುಗಳನ್ನು ವಿತರಿಸಲು ಆಗ್ರಹಿಸಿ ಸ್ಲಂ ಜನಾಂದೋಲನಾ ಕರ್ನಾಟಕ ಸಂಘಟನೆ ನೇತೃತ್ವದಲ್ಲಿಂದು ಪ್ರತಿ ಭಟನೆ ಕೈಗೊಳ್ಳಲಾಯಿತು.
ರಾಷ್ಟ್ರೀಯ ವಿಪತ್ತು ಪರಿಹಾರದಡಿ ೩ ತಿಂಗಳ ಕಾಲ ಸ್ಲಂ ನಿವಾಸಿಗಳಿಗೆ ಆರ್ಥಿಕ ಪರಿಹಾರ, ಅಗತ್ಯವಸ್ತು, ಪಡಿತರ ವಿತರಿಸಬೇಕು, ಎಲ್ಲ ನಾಗರಿಕರಿಗೆ ಉಚಿತ ಕೋವಿಡ್ ಲಸಿಕೆ ಮತ್ತು ಚಿಕಿತ್ಸೆ ಕಲ್ಪಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಇಲ್ಲಿನ ಅಧಿಕಾರಿಗಳ ಮುಖಾಂತ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಸುನೀತಾ ಕೊಲ್ಲೂರ, ರೇಣುಕಾ ಸರಡಗಿ, ರಾಶಿ ರಾಠೋಡ, ಶಾರದಾ ಹಿರೇಬಜಾರ, ನಿಲಮ್ಮ ಸುಕನ್ಯ, ಸಂಗೀತಾ ತಳವಾರ, ಗೌರಮ್ಮ, ಮಕಾ, ರತ್ನಮ್ಮ ದುತ್ತರಗಾಂವ ಇದ್ದರು.