ಮತದಾನ ಜಾಗೃತಿ ಕಾರ್ಯಕ್ರಮ

0
103

ಕಲಬುರಗಿ: ಸ್ವೀಪ್ ಕಲಬುರಗಿ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ವತಿಯಿಂದ ಇಂದು ರಾತ್ರಿ ನಗರದ ಜಗತ್ ವೃತ್ತದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2019ರ ಲೋಕಸಭೆ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡುವಂತೆ ಸಂಕಲ್ಪ ಪತ್ರ (ಕರಪತ್ರ) ಹಂಚಲಾಯಿತು. ಜಿಲ್ಲಾಧಿಕಾರಿ ಆರ್. ವೆಂಕಟೇಶ, ಡಿಡಿಪಿಐ ಶಾಂತಗೌಡ, ಜಿಪಂ ಸಿಇಒ ಪಿ.‌ರಾಜ್, ಮಹಾನಗರ ಪಾಲಿಕೆ ಕಮಿಷನರ್ ಫೌಜಿಯಾ ಇತರರು ಇದ್ದರು. ಬಿಇಒ ಚನ್ನಬಸಪ್ಪ ಮುಧೋಳ ಮತದಾನದ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

Contact Your\'s Advertisement; 9902492681

ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ವಿವಿಧ ಇಲಾಖೆಯ ಸರ್ಕಾರಿ ನೌಕರರು, ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here