ಚಿತ್ತಾಪುರ: ಜಿಲ್ಲೆಯಾದ್ಯಂತ ಗುರುವಾರದಿಂದ ರವಿವಾರದ ವರೆಗೂ ವಿಶೇಷ ಲಾಕ್ ಡೌನ್ ಇದ್ದು ತುರ್ತು ಅಗತ್ಯ ಸಂಚಾರ ಹೊರತುಪಡಿಸಿ ಎಲ್ಲಾ ವಾಹನ ಸಂಚಾರಕ್ಕೆ ನಿರ್ಬಂಧವಿದೆ.
ಪಟ್ಟಣದಲ್ಲಿ ನಿಯಮ ಉಲ್ಲಂಘನೆ ಮಾಡಿ ಸಂಚಾರ ಮಾಡುತ್ತಿದ್ದ 70 ದ್ವಿಚಕ್ರ ವಾಹನ ಹಾಗೂ 06 ನಾಲ್ಕು ಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಮೊದಲೇ ಲಾಕ್ ಡೌನ್ ನಿಂದ ಆರ್ಥಿಕವಾಗಿ ನಷ್ಟಕ್ಕೆ ತುತ್ತಾಗಿದ್ದು ವಿನಃ ಕಾರಣ ಹೊರಗೆ ಬಂದರೆ ವಾಹನ ಜಪ್ತಿಮಾಡಲಾಗಿದೆ,ಲಾಕ್ ಡೌನ್ ಮುಗಿದ ಮೇಲೆ ಸೀಸ್ ಆದ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ.ಬೃಹತ್ ಪ್ರಮಾಣದ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ.
ದಯಮಾಡಿ ಸಾರ್ವಜನಿಕರು ಮನೆಯಿಂದ ಹೊರಗೆ ಬರದೆ ಕಾನೂನಿಗೆ ಸಹಕಾರ ನೀಡಿ ಕರೋನಾ ವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕ್ರೈಂ ಪಿಎಸ್ಐ ಚೇತನ್ ,ಸಿಬಂದ್ದಿಗಳಾದ ಮಹೇಶ ರೆಡ್ಡಿ,ಅಜರೋದಿನ್,ಶರಣು,ಷಣ್ಮುಖ, ಶಂಕರಗೌಡ,ಮುಖ್ತುಂ ಪಟೇಲ್, ಚಿದಾನಂದ, ಅಬ್ದುಲ್ ರೆಹಮಾನ್ ಇದ್ದರು.