ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ ಗ್ರಾಮ ಪಂಚಾಯತಿ ಮುಂದೆ ಜನವಾದಿ ಮಹಿಳಾ ಸಂಘಟನೆ ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಉದ್ಯೋಗ ಖಾತ್ರಿ ಕೆಲಸ ಕೊಡಲು ಆಗ್ರಹಿಸಿ ಗ್ರಾಮ ಪಂಚಾಯತಗೆ ಘೇರಾವ್ ಹಾಕಲಾಯಿತು.
ಹೊಟ್ಟೆಗೆ ಅನ್ನವಿಲ್ಲದಿದ್ದರೆ ಬದುಕುವುದು ಹೇಗೆ? ಕೊರೋನಾ ನೆಪ ಮಾಡಿಕೊಂಡು ಜನರಿಗೆ ಮನರೇಗಾ ಕೆಲಸದಿಂದ ವಂಚಿಸಲಾಗುತಿದೆ. ಕೆಲಸ ಕೊಡಬೇಕೆಂದು ಸರಕಾರದ ಆದೇಶ ಇದ್ದರೂ ಕೆಲಸ ಕೊಡುತ್ತಿಲ್ಲ ಎಂದು ಜನರು ಆರೋಪಿಸಿದರು.