ಕಲಬುರಗಿ ಜಿಲ್ಲಾದ್ಯಂತ ಮಳೆ: ಹಲವು ಮನೆಗಳು ಜಲಾವೃತ

0
76

ಶಹಾಬಾದ: ತಾಲೂಕಿನಲ್ಲಿ ಶನಿವಾರ ಸಾಯಂಕಾಲ ಗುಡುಗು- ಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು.ಇದರಿಂದ ಕಾದು ಹಂಚಿನಂತಾಗಿದ್ದ ಧರೆಯನ್ನು ಮಳೆ ತಾಂಪಾಗಿಸಿತು.

ಸುಮಾರು ದಿನಗಳಿಂದ ಬಿಸಿಲಿನ ಬೇಗೆಗೆ ಬೆಂದ ಜನರು ವಾತವಾರಣ ತಾಂಪಾಗಿದ್ದರಿಂದ ನಿಟ್ಟುಸಿರು ಬಿಡುವಂತಾಯಿತು.
ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗಿನ ರಸ್ತೆ ಸಂಪೂರ್ಣ ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು.ಅಲ್ಲದೇ ನಗರದ ಕೆಲವು ಪ್ರದೇಶಗಳಲ್ಲಿ ಚರಂಡಿ ತುಂಬಿಕೊಂಡು ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಪ್ಲಾಸ್ಟಿಕ್, ಕಸ-ಕಡ್ಡಿ ರಸ್ತೆಯ ಆವರಿಸಿಕೊಂಡಿತು.

Contact Your\'s Advertisement; 9902492681

ನಗರದ ನಿಜಾಮ ಬಜಾರ ಪ್ರದೇಶದಲ್ಲಿ ಚರಂಡಿ ನಿರ್ಮಾಣವಾಗದಿರುವುದರಿಂದ ಮಳೆ ನೀರು ಸಂಪೂರ್ಣ ಬಡಾವಣೆಯ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಜಲಾವೃತಗೊಂಡು ಸಾರ್ವಜನಿಕರು ಮನೆಯಿಂದ ಹೊರಬಾರದಂತಾಯಿತು. ಇನ್ನು ಕೆಲವು ಪ್ರದೇಶಗಳಲ್ಲಿ ಗಿಡ ಮರಗಳು ಬಿದ್ದಿರುವುದು ಕಂಡು ಬಂದಿತು.

ಸುಮಾರು ಎರಡು ವರ್ಷಗಳಿಂದ ಚರಂಡಿ ನಿರ್ಮಾಣ ಮಾಡುತ್ತೆವೆ ಎಂದು ತಗ್ಗು ತೋಡಿ ಕಾಂಗಾರಿ ಮಾಡದೇ ಹೋಗಿದ್ದಾರೆ.ಅಲ್ಲದೇ ಇನ್ನೊಂದು ಬದಿಯಲ್ಲಿ ಕಳಪೆ ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿರುವುದರಿಂದ ರಸ್ತೆಯ ಮೇಲೆ ನೀರು ನಿಲ್ಲುವಂತಾಗಿದೆ. ನಗರದ ಮುಖ್ಯ ರಸ್ತೆ ಸಂಪೂರ್ಣ ಆವರಿಸಿಕೊಂಡು ಚರಂಡಿ ನೀರು ರಸ್ತೆಯ ಮೇಲೆ ಹರಿದಾಡುತ್ತಿರುವುದರಿಂದ ನಗರಸಭೆಯ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here