ಪಿ.ಲಂಕೇಶ್ ರ ಶೋಧ ಸಾರಾ ಅಬೂಬಕರ್..!

0
24

ಆ ಕಾಲದಲ್ಲಿ ಮುಸ್ಲಿಂ ಬರಹಗಾರರಿಗೆ ಒಂದು ಬರಹದ ಪ್ರೋತ್ಸಾಹವಿರಲಿಲ್ಲ. ಆಗ ಸಾ.ರಾ.ಅಬೂಬಕರ್ ರ ಬರಹದ ಪ್ರೋತ್ಸಾಹಕ್ಕೆ ಬಂದವರು ಪಿ.ಲಂಕೇಶ್ ರು. ಹಾಗಾಗಿ ಸಾ.ರಾ.ಅಬೂಬಕರ್ ರ ಮೊದಲ ಗುರುಗಳು ಪಿ.ಲಂಕೇಶ್ ರು ಅಂದರೆ ಅಡ್ಡಿಯಿಲ್ಲ.

ಮುಸ್ಲಿಂ ಮಹಿಳೆಯರಿಗೆ ತಮ್ಮ ಅನಿಸಿಕೆಗಳನ್ನು ಹೊರಹಾಕಲು ಪ್ರತ್ಯೇಕ ವೇದಿಕೆಗಳೇ ಇಲ್ಲದ ಕಾಲದಲ್ಲಿ, ಮುಸ್ಲಿಂ ಮಹಿಳೆಯರ ದನಿಯಾಗಿ ಸಾಹಿತ್ಯದ ಮೂಲಕ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಸಿದ ಲೇಖಕಿ ಸಾ.ರಾ.ಅಬೂಬಕರ್ ರವರು.

Contact Your\'s Advertisement; 9902492681

ಸಾ.ರಾ.ಅಬೂಬಕರ್ ಹುಟ್ಟಿದ್ದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮದಲ್ಲಿ. ತಂದೆ ನ್ಯಾಯವಾದಿಗಳಾಗಿದ್ದ ಪಿ.ಅಹಮದ್, ತಾಯಿ ಚೈನಾಬಿ ಅಂತ. ಸಾ.ರಾ.ಅಬೂಬಕರ್ ರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ಆಯಿತು. ಹೈಸ್ಕೂಲು ವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಸಾ.ರಾ.ಅಬೂಬಕರ್ ರು ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಬರೆಯಬೇಕೆಂದು ಬಾಲ್ಯದಲ್ಲೇ ಹುಟ್ಟಿದ ಕನಸು ನಿರ್ಧಾರವಾಯಿತು.

ಎಂಜನಿಯರ್ ಆಗಿದ್ದ ಅಬೂಬಕರ್‌ ರೊಡನೆ ವಿವಾಹವಾಯಿತು. ಅಲ್ಲಿಂದ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದರು ಸಾ.ರಾ.ಅಬೂಬಕರ್. ಆದರೆ ಕಾರಂತರು, ಇನಾಂದಾರ್, ಭೈರಪ್ಪ, ಯು.ಆರ್.ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾದರು ಸಾ.ರಾ.ಅಬೂಬಕರ್ ಅವರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳ ಆಕರ್ಷಣೆಗೆ ಒಳಗಾದರು ಸಾ.ರಾ.ಅಬೂಬಕರ್. ಬದುಕುತ್ತಿದ್ದ ಸುತ್ತಮುತ್ತಲಿನ ಪರಿಸರದಲ್ಲಿ ಮನೋವ್ಯಾಕುಲತೆಗೊಳಗಾಗುತ್ತಿದ್ದ ಬಹಳಷ್ಟು ಮುಸ್ಲಿಂ ಹೆಂಗಸರ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದರು.

ತಲಾಕ್ ಸಂಪ್ರದಾಯದ, ಮಕ್ಕಳಾದ ನಂತರದ ಅಸಹನೀಯ ಬದುಕು, ಅಣ್ಣ ತಂದು ಕೊಡುತ್ತಿದ್ದ ವೈ.ಕಂ.ಮಹಮದ್ ಬಷೀರ್‌ ರವರ ಕಾದಂಬರಿಗಳ ಪ್ರಭಾವ- ಬರೆಯಬೇಕೆಂಬ ಅಂತರಾಳದ ಒತ್ತಡ. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನ ಎಂ.ಕೆ.ಇಂದಿರಾರವರಂತೆ ನಲವತ್ತು ದಾಟಿದ ನಂತರ ಪ್ರಾರಂಭಿಸಿದ ಸಾಹಿತ್ಯದ ಬರಹ ಶುರುಮಾಡಿದರು ಸಾ.ರಾ.ಅಬೂಬಕರ್.

ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಹೊರಹೊಮ್ಮಿದ ಶೋಷಿತ ಮುಸ್ಲಿಂ ಮಹಿಳೆಯರ ದನಿಯಾಗಿ, ವಾಸ್ತವಿಕ ಬದುಕಿನ ಚಿತ್ರಣದ ಈ ಕಾದಂಬರಿಯನ್ನು ಬರೆದರು. ಪಿ.ಲಂಕೇಶ್ ರವರು ಸಾ.ರಾ.ಅಬೂಬಕರ್ ರವರೆಗೆ ಬರೆಯಲು ಸಂಪೂರ್ಣ ಪ್ರೊಸ್ತಾಹ ನೀಡಿದರು. ಇದರಿಂದ ಸಾ.ರಾ.ಅಬೂಬಕರ್ ಬಹುಬೇಗ ಓದುಗರಿಂದ ಪಡೆದ ಮೆಚ್ಚುಗೆ ಪಡೆದರು. ನಂತರ ಬರೆದದ್ದು ಹಲವಾರು ಕಾದಂಬರಿಗಳು.

ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-2), ತಳ ಒಡೆದ ದೋಣಿ, ಪಂಜರ. ಕಥಾ ಸಂಕಲನಗಳು-ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ, ಬಾನುಲಿ ನಾಟಕಗಳು-ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವು. ಲೇಖನ ಮತ್ತು ಅನುವಾದಗಳು-ಲೇಖನ ಗುಚ್ಛ, ಮನೋಮವಿಜ್ಞಾನದ ಬಲೆ, ನಾನಿನ್ನು ನಿದ್ರಿಸುವೆ (ಕಾದಂಬರಿಗಳು)ಗಳನ್ನು ಮತ್ತು ಪ್ರವಾಸಕಥನ-ಐಷಾರಾಮದಲ್ಲಿ ಬರೆದರು.

ಸಾ.ರಾ.ಅಬೂಬಕರ್ ರನ್ನು ಹುಡಿಕಿಕೊಂಡು ಬಂದ ಪ್ರಶಸ್ತಿಗಳೆಂದರೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕ.ಸಾ.ಪ.ನ.ಬಿ. ಸರೋಜಾದೇವಿ ಪ್ರಶಸ್ತಿ, ಸಹನಾ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ಸುಳಿಯಲ್ಲಿ ಸಿಕ್ಕವರು ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಇತ್ತೀಚಿನದು-ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪ್ರಮುಖವಾದುವುಗಳು ಸಾ.ರಾ.ಅಬೂಬಕರ್ ರನ್ನು ಅರಸಿ ಬಂದವು..!

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here