ಸುರಪುರ: ಡಿಸಿಸಿ ಬ್ಯಾಂಕ್ ನೂತನ ಕಾರ್ಯಾಲಯದ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ನಡೆದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ಉದ್ಘಾಟಕರಾಗಿ ಶಿವಾನಂದ ಮಾನಕರ್ ನಿರ್ದೇಶಕರು ಡಿಸಿಸಿ ಬ್ಯಾಂಕ್ ಕಲಬುರ್ಗಿ ಯಾದಗಿರಿ ಹಾಗು ಅಪೇಕ್ಸ್ ಬ್ಯಾಂಕ್ ನಿರ್ದೇಶಕರು ಬೆಂಗಳೂರು ಅವರು ಭಾಗವಹಿಸಿದ್ದರು.ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕ್ ಕಲಬುರಗಿ ಮತ್ತು ಯಾದಗಿರಿ ಉಪಾಧ್ಯಕ್ಷ ಸುರೇಶ ಸಜ್ಜನ್ ವಹಿಸಿದ್ದರು.
ಮುಖ್ಯತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್ ಹಾಗು ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಬಸವರಾಜ ಪಾಟೀಲ್ ಜೇವರ್ಗಿ ಶರಣಬಸಪ್ಪ ಪಾಟೀಲ್ ಅಷ್ಟಗಿ ನಿಂಗಣ್ಣ ದೊಡ್ಮನಿ ಚಿದಾನಂದ ನಿಂಬಾಳಕರ್ ನಿರ್ದೇಶಕರು ಡಿಸಿಸಿ ಬ್ಯಾಂಕ್ ಹಾಗು ಸಿಒ ಕಲಬುರ್ಗಿ, ಮುತ್ತುರಾಜ್ ಜಿ.ಎಮ್. ಡಿಸಿಸಿ ಬ್ಯಾಂಕ್ ಕಲಬುರ್ಗಿ ಹಾಗು ಮುಖಂಡರಾದ ಕಿಶೋರಚಂದ್ ಜೈನ್ ಬಸವರಾಜ ಜಮದ್ರಖಾನಿ ವಿರೇಶ ನಿಷ್ಠಿ ದೇಶಮುಖ ಜಯಲಲಿತ ಪಾಟೀಲ್ ಜಗದೀಶ ಪಾಟೀಲ್ ಶಿವರುದ್ರ ಉಳ್ಳಿ ಮತ್ತು ಶರಣಬಸಪ್ಪ ಬಿ.ಕೆ ಮ್ಯಾನೆಜರ್ ಸುರಪುರ ಶಾಖೆ,ಮೇಲ್ವಿಚಾರಕರಾದ ಬಸವರಾಜ ಕರಡಕಲ್ ಶಿವಲಿಂಗಪ್ಪ ವೆಂಕಟಗಿರಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿದ್ದರು.