ಕಲಬುರಗಿ: ನಗರದ ವಾರ್ಡ ನಂ.೯ರ ರಾಮತಿರ್ಥ ಬಡಾವಣೆಯ ಅಂಬಾ ಭವಾನಿ ಮಂದಿರದಲ್ಲಿ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಮಹಾನಗರ ಜಿಲ್ಲೆಯ ಕಾರ್ಯದರ್ಶಿ ಸಿದ್ದು ಸಂಗೋಳಗಿ, ನೇತೃತ್ವದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ಗಳು ಹಾಗೂ ಸ್ಯಾನಿಟೆಜರ್ಗಳನ್ನು ಡಾ.ಕೈಲಾಸ ಪಾಟೀಲ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಅಶೋಕ ಮಾನಕರ, ಚನ್ನವೀರ ಲಿಂಗನವಾಡಿ, ಎಸ್.ಕೆ.ಕುಂಬಾರ, ಬಿ.ಎಸ್.ಪಾಟಿಲ್, ಬ್ರಹ್ಮ ಕೊಕಲೆ, ಆನಂದರಾವ ಚಿಂಚೋಳಿ, ಕುಮಾರ ಪಾಟೀಲ, ದತ್ತು ಸುಗಂಧಿ, ಅಶೋಕ ಕಟ್ಟಿಮನಿ, ಮಾಹಾಂತು ಕಲಶೆಟ್ಟಿ, ಮಂಜು ಗುತ್ತೇದಾರ, ಸತೋಷ ಇದ್ದರು.