ಸೇಡಂ : ಕೊವಿಡ್ ಸಂಕಷ್ಟದಲ್ಲಿರುವ ಜನರಿಗೆ ನೇರವಾಗುವ ಕಾರ್ಯ ಪ್ರತಿಯೊಬ್ಬರಿಂದಲೂ ನಡೆಯಬೇಕಾದ ಆಗತ್ಯತೆ ಇದೆ ಎಂದು ಕೋಲಕುಂದಾ ಗ್ರಾಮದ ವೀರಭದ್ರ ದೇವಾಸ್ಥಾನದ ಪೂಜ್ಯ ಮಹಾಂತಯ್ಯ ಸ್ವಾಮಿಗಳು ಹೇಳಿದರು.
ಸೇಡಂ ತಾಲೂಕಿನ ಕೋಡ್ಲಾ ಹಾಗೂ ಕುಲಕುಂದಾ ಗ್ರಾಮದಲ್ಲಿ ಬಾಲರಾಜ್ ಗುತ್ತೇದಾರ ಬೀ ಗ್ರೇಡ್ ವತಿಯಿಂದ 2500 ಕ್ಕೂ ಅಧಿಕ ಆಹಾರ ಪದಾರ್ಥದ ಕಿಟ್ ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಸೇಡಂ ಮತಕ್ಷೇತ್ರದಲ್ಲಿ ಬಾಲರಾಜ್ ಗುತ್ತೇದಾರ ಅವರು ಕರೊನಾ 2ಅಲೇ ಪ್ರಾರಂಭವಾದಗಿ ನಿಂದಲು ಕ್ಷೇತ್ರದ ಜನರ ನೇರವಿಗೆ ನೀತಿದ್ದಾರೆ. ಕ್ಷೇತ್ರದ ಪ್ರತಿ ಹಳ್ಳಿಗೂ ಸ್ಯಾನಿಟೈಸರ್ ಸಿಂಪರಣೆ ಹಾಗೂ ಉಚಿತ 2 ಆಂಬ್ಯುಲೆನ್ಸ್ ಸೇವೆ ನೀಡುವುದರ ಜೋತೆಗೆ 40 ಸಾವಿರಕ್ಕೂ ಅಧಿಕ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡುತಿರುವ ಕಾರ್ಯ ನಿಜಕ್ಕೂ ಶಾಘ್ಲನೀಯವಾಗಿದೆ ಎಂದರು.
ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಮಾತನಾಡಿ ಸೇಡಂ ಮತಕ್ಷೇತ್ರದ ಪ್ರತಿ ಗ್ರಾಮದಲ್ಲಿ ಇಗಾಗಲೇ ಸ್ಯಾನಿಟೈಸರ್ ಮಾಡಲಾಗಿದು ಜೋತೆಗೆ ಪ್ರತಿ ಗ್ರಾಮದಲ್ಲಿ 1 ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥದ ಕಿಟ್ ವಿತರಿಸಲಾಗುತಿದೆ. ಜೋತೆಗೆ ಪ್ರತಿಯೊಬ್ಬರು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಮಹಾಮಾರಿ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದ್ದು, ತಮ್ಮ ಆರೋಗ್ಯ ಮತ್ತು ಜೀವದ ರಕ್ಷಣೆ ತಮ್ಮ ಕೈಯಲ್ಲಿದೆ ಆದಕಾರಣ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಸಬೇಕು ಎಂದು ಕೋರೊನ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸೇಡಂ ಪುರಸಭೆ ಮಾಜಿ ಅಧ್ಯಕ್ಷ ಯಕ್ಬಾಲ್ ಖಾನ್ .ಜೆಡಿಎಸ್ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ. ವಿಜಯಕುಮಾರ ಕುಲಕರ್ಣಿ. ಸಂತೋಷ ಕೇರೋಳ್ಳಿ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು