ಚಿತ್ತಾಪುರ ಕೋವಿಡ್ ಸೆಂಟರ್ ಗೆ ವಿಠಲ್ ನಾಯಕ್ ಭೇಟಿ

0
100

ಚಿತ್ತಾಪುರ:ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕೋವಿಡ್ ಕೇರ್ ಸೆಂಟರ್ ಗೆ ಯುವ ಮುಖಂಡ ವಿಠಲ ನಾಯಕ್ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದರು.

ಕೋವಿಡ್ ಕೇರ್ ಸೆಂಟರ್ ನಲ್ಲಿನ ಚಿಕಿತ್ಸೆ, ಶೌಚಾಲಯ, ಸ್ವಚ್ಛತೆ ಹಾಗೂ ಉತ್ತಮ ಗುಣಮಟ್ಟದ ಊಟ ಉಪಚಾರದ ಬಗ್ಗೆ ಸೋಂಕಿತರಿಂದಲೇ ಮಾಹಿತಿ ಪಡೆದರು.ಸೋಂಕಿತರಿಗೆ ಕೊರೋನ ಆತಂಕ ಪಡದಂತೆ ಧೈರ್ಯ ತುಂಬಿದರು.
ಸೋಂಕಿತರಿಗೆ ಹಣ್ಣು,ಮಾಸ್ಕ್ ಸಾನಿಟೈಜರ್ ವಿತರಿಸಿ, ಸರಿಯಾದ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಮಾಹಿತಿ ಪಡೆದರು.ಕರ್ತವ್ಯನಿರತ ವೈದ್ಯಾಧಿಕಾರಿಗಳ ಜೊತೆ ಅವರ ಔಷಧೋಪಚಾರಗಳ ಬಗ್ಗೆ ಮಾತುಕತೆ ನಡೆಸಿದರು.

Contact Your\'s Advertisement; 9902492681

ಪುರಸಭೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳುವದಿರುವ ಬಗ್ಗೆ ಸೋಂಕಿತರಿಂದ ಅರಿತ ತಕ್ಷಣ ಆಕ್ರೋಶ ವ್ಯಕ್ತಪಡಿಸಿದ ವಾಡಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಪ್ರಾರಂಭದಿಂದ ಇದೇ ಆರೋಪ ಇದ್ದರೂ ಪುರಸಭೆ ಇನ್ನೂ ಎಚ್ಚೆತ್ತು ಗೊಳ್ಳದಿರುವುದರಿಂದ ಮೇಲಾಧಿಕಾರಿಗಳಿಗೆ ಕ್ರಮದ ಬಗ್ಗೆ ಮತ್ತೊಮ್ಮೆ ದೂರು ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್ ಸಿ ಮೂರ್ಚಾದ ತಾಲ್ಲೂಕ ಅಧ್ಯಕ್ಷರಾದ ರಾಜು ಮುಕ್ಕಣ್ಣ, ಯುವ ಮುಖಂಡರಾದ ಮಲ್ಲು ಇಂದೂರ,ಸತೀಶ್ ಸಾವಳಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here