ಶಹಾಬಾದ: ಕೊರೊನಾ ಎರಡನೇ ಮಹಾಮಾರಿ ಅಲೆಯಲ್ಲಿ ಕಳೆದ 14 ತಿಂಗಳಿಂದ ಖಾಸಗಿ ಶಾಲಾ ಕಾಲೇಜಗಳ ಶಿಕ್ಷಕರು ಬಿಡಿಗಾಸು ವೇತನವಿಲ್ಲದೆ ಮನೆಯಲ್ಲಿದ್ದಾರೆ. ಕುಟುಂಬ ನಿರ್ವಹಣೆ ಸಾಧ್ಯವಾಗದೆ ಅಕ್ಷರಶಃ ಕಷ್ಟದಲ್ಲಿದ್ದಾರೆ.
ಶಹಾಬಾದ ತಾಲೂಕಿನ ಖಾಸಗಿ ಶಾಲಾ ಕಾಲೇಜನ ಅತಿಥಿ ಶಿಕ್ಷಕರಿಗೆ ಪಟ್ಟಣದ ಸ್ವಾಮಿವೇಕಾನಂದ ಶಾಲೆಯಲ್ಲಿ ಇಂದು ಓಂ ಪತ್ತಿನ ಸಹಕಾರ ಸಂಘದಿಂದ ದಿನಬಳಕೆಯ ವಸ್ತುಗಳುಳ್ಳ ಕಿಟ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಹಾಬಾದ ನಗರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಹಳ್ಳೂರ್, ಸಾನಿಧ್ಯ ಶ್ರೀ ಶರಣ ಕೊತಲಪ್ಪ ಮುತ್ಯಾ ತೋನಸನಹಳ್ಳಿ ಎಸ್. ಸಂಘದ ಅಧ್ಯಕ್ಷರಾದ ಬಸವರಾಜ ಮದ್ರಿಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಗುಂಡಮ್ಮ, ರಾಮಣ್ಣ ಇಬ್ರಾಹಿಂಪುರ್, ಹಣಮಂತ ಜಾಧವ ವೇದಿಕೆ ಮೇಲಿದ್ದರು, ಶಿವಕುಮಾರ್ ಕುಸಳೆ, ಮಮ್ಮದ ಇರ್ಫಾನ್, ಭಾಗವಸಿದ್ಧರು. ವಿವಿಧ ಖಾಸಗಿ ಶಾಲಾ -ಕಾಲೇಜನ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.