ಬಡ ಬ್ರಾಹ್ಮಣರಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಕಿಟ್ ವಿತರಣೆ

0
53

ಶಹಾಬಾದ: ನಗರದ ಕೊಲ್ಲಾಪೂರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ನಗರದ ಬ್ರಾಹ್ಮಣರಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗದೀಶ ಹುನಗುಂದ ಆಹಾರದ ಕಿಟ್ ವಿತರಣೆ ಮಾಡಿದರು.

ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಬಡ ಬ್ರಾಹ್ಮಣ ಸಮಾಜದ ಕುಟುಂಬಗಳಿಗೆ ಸಹಾಯ ಮಾಡಲು ನಾವಿದ್ದೇವೆ.ಅಲ್ಲದೇ ಯಾರು ಧೈರ್ಯ ಬಿಡಬೇಡಿ.ನಮ್ಮ ಸಮಾಜ ಯಾವಾಗಲೂ ನಿಮ್ಮ ಸಹಾಯಕ್ಕೆ ಟೊಂಕ ಕಟ್ಟಿ ನಿಂತಿದೆ.ಆದಷ್ಟು ಮಾಸ್ಕ್ ಧರಿಸಿ, ಸಾಮಾಜಿಕ ಅಮತರ ಕಾಪಾಡಿ.ಅಲ್ಲದೇ ಸಮಾಜದ ಎಲ್ಲ ಜನರು ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಹೇಳಿದರು.

Contact Your\'s Advertisement; 9902492681

ಶಹಾಬಾದ್ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀಧರ್ ಜೋಶಿ, ಶಂಕರ ಸೋಮ್ಯಾಜಿ, ವಾಸುದೇವ್ ಆಚಾರ್ಯ ಜೋಶಿ, ಶಂಕರ ರಾವ್ ಮಹಾರಾಜ್, ಆಡಿ ಶಂಕರಾವ್ ಭಟ್ಟ ಸೋಮ್ಯಾಜಿ,ಪ್ರಮೋದ ಕುಲಕರ್ಣಿ,ಗುರುರಾಜ ಭರತನೂರ್,ವಿನಾಯಕ ಮುಜಂದರ, ಗುರುರಾಜ ಮಾಲಿಪಾಟೀಲ್, ಅಶೋಕ ಸೋಮ್ಯಾಜಿ,ಸುಧೀರ್ ಜೋಶಿ, ಗಜಾನನ ಕುಲಕರ್ಣಿ, ಅಜಯ ಸರೋದೇ, ಶರಣು, ಗೋಪಾಲ ಕುಲಕರ್ಣಿ ಸರಡಗಿ, ರಮೇಶ ಭಟ್ ಹಾಗೂ ಬ್ರಾಹ್ಮಣ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here