ರಾಯಚೂರು: ಕೋವಿಡ್ ಹಾಗೂ ಲಾಕ್ ಡೌನ್ ದುಸ್ಥಿತಿಗೆ ಸಮರ್ಪಕ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಎಡ ಪ್ರಜಾಸತ್ತಾತ್ಮಕ ಪಕ್ಷಗಳ ನೇತೃತ್ವದಲ್ಲಿ ಇಂದು ಲಿಂಗಸ್ಗೂರ ಕ್ಷೇತ್ರದ ಶಾಸಕ ಡಿ.ಎಸ್.ಹೂಲಿಗೇರಿ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ರಮೇಶ ವೀರಾಪೂರು, ಮಹ್ಮದ್ ಹನೀಫ್, ಸಿಪಿಐ ನ ವೆಂಕೋಬ್ ಮಿಯ್ಯಾಪೂರು, ಎಸ್ ಯುಸಿಐ ಮುಖಂಡ, ಶರಣಪ್ಪ ಉದ್ಬಾಳ, ಎಂಎಲ್ ಪಿಐ (ರೆಡ್ ಸ್ಟಾರ್) ಮುಖಂಡ ಬಿ ಬಸಲಿಂಗಪ್ಪ ನಗನೂರು, ಸಿಪಿಐಎಂ ಮುಖಂಡರಾದ ಮಾನಪ್ಪ ಲೆಕ್ಕಿಹಾಳ, ಸದ್ದಾ ಹುಸೇನ್, ಹನುಮಂತ ಕಟ್ಟಿಮನಿ, ನಿಂಗಪ್ಪ ಪಾನ್ ಶಾಪ್, ಶಿವರಾಜ್ ಕಪಗಲ್, ಬೆಟ್ಟಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.