ಕಲಬುರಗಿ: ಪೆಟ್ರೋಲ್ ಡಿಸೇಲ್ ಬೆಲೆಯು ನಿಯತ್ರಣಕ್ಕೆ ತರದ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ನಗರದ ನಾಗನಹಳ್ಳಿ ಕ್ರಾಸ್ ಹತ್ತಿರ ವಿರುವ ಪೆಟ್ರೋಲ್ ಪಂಪ್ ಎದುರುಗಡೆ ಜಿಲ್ಲಾ ಕಾಂಗ್ರೇಸ್ ಸಮಿತಿ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಕೆ.ಸಂಗಾವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ದಕ್ಷೀಣ ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷರಾದ ಅಪ್ಪರಾವ ಪಟ್ಟಣ, ದೇವಿಂದ್ರ ಪಿ.ನಡುವಿನಮನಿ, ಮುಖಂಡರಾದ ಅಂಬಾರಾಯ ಶೇಳ್ಳಗಿ, ಆನಂದ ಸಂಗಾವಿ, ಮಹೇಶ ತೆಲ್ಲೂರಕರ್, ಉಮೇಶ ಕುಲಕರ್ಣಿ, ಸಂಜು ಗಾಯಕವಾಡ ಇದ್ದರು.