ಸಂಸದ ಡಾ.ಉಮೇಶ ಜಾಧವಗೆ ಸಚಿವ ಸ್ಥಾನ ನೀಡಲು ಸಿದ್ದು ಮಾನಕರ್ ಮನವಿ

0
24

ಕಲಬುರಗಿ: ವೈದ್ಯಕಿಯ ವೃತ್ತಿ ಜೀವನದಿಂದ ಸಮಾಜಿಕ ಸೇವೆಯಲ್ಲಿ ಇದ್ದುಕೊಂಡು ಎರಡು ಸಲ ಶಾಸಕರಾಗಿ ಮತ್ತು ಅತಿ ಹೆಚ್ಚಿನ ಮತಗಳ ಅಂತರದಿಂದ ಸಂಸದರಾಗಿ ಆಯ್ಕೆಯಾಗಿರುವ ಡಾ.ಉಮೇಶ ಜಾಧವ ಅವರಿಗೆ ಸಚಿವ ಸ್ಥಾನ ನೀಡುವಂತೆ ಬಿಜೆಪಿ ಮುಖಂಡ ಸಿದ್ದು ಮಾನಕರ್ ಅವರು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೊದಲ ಆಧ್ಯತೆ ನೀಡಬೇಕು, ಡಾ.ಉಮೇಶ ಜಾಧವ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡುವ ಮೂಲಕ ಈ ಪ್ರದೇಶಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂದು ಮಾನಕರ್ ಅವರು ಬಿಜೆಪಿ ವರಿಷ್ಟರಲ್ಲಿ ಮನವಿ ಮಾಡಿದ್ದಾರೆ.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here