Tuesday, July 16, 2024
ಮನೆಬಿಸಿ ಬಿಸಿ ಸುದ್ದಿಅನ್‌ಲಾಕ್ ಹಿನ್ನೆಲೆ ಸ್ವಚ್ಛಗೊಂಡ ನಗರದ ಅಂಗಡಿ ಮುಂಗಟ್ಟುಗಳು

ಅನ್‌ಲಾಕ್ ಹಿನ್ನೆಲೆ ಸ್ವಚ್ಛಗೊಂಡ ನಗರದ ಅಂಗಡಿ ಮುಂಗಟ್ಟುಗಳು

ಸುರಪುರ: ಕೊರೊನಾ ಎರಡನೇ ಅಲೆಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಗೊಂಡು ನಗರದಲ್ಲಿನ ಅಂಗಡಿ ಮುಂಗಟ್ಟುಗಳು ಬಂದಾಗಿ ಸುಮಾರು ನಲವತ್ತು ದಿನಗಳು ಕಳೆದಿದ್ದು ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು.

ಈಗ ಕೊರೊನಾ ಅಲೆ ಕಡಿಮೆಯಾಗಿದ್ದರಿಂದ ರಾಜ್ಯದಲ್ಲಿ ಅನ್‌ಲಾಕ್ ಘೋಷಣೆಯಾಗಿ ಸೋಮವಾರ ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಎಲ್ಲಾ ವ್ಯಾಪಾರ ಮಳಿಗೆಗಳು ತೆಗೆಯಬಹುದು ಎಂದು ಆದೇಶ ಹೊರಬಂದಿದ್ದರಿಂದ ನಗರದಲ್ಲಿನ ಎಲ್ಲಾ ವ್ಯಾಪಾರಸ್ಥರು ಭಾನುವಾರ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛಗೊಳಿಸುತ್ತಿರುವುದು ಕಂಡುಬಂತು.

ಈ ಕುರಿತು ವ್ಯಾಪಾರಿಯೊಬ್ಬರು ಮಾತನಾಡಿ,ಕಳೆದ ಒಂದು ತಿಂಗಳಿಗು ಹೆಚ್ಚು ಕಾಲದಿಂದ ಅಂಗಡಿಗಳು ಮುಚ್ಚಿದ್ದರಿಂದ ಅಂಗಡಿಗಳಲ್ಲೆಲ್ಲ ಧೂಳು ಮೆತ್ತಿದೆ,ಆದರೆ ಈಗ ಸೋಮವಾರದಿಂದ ಅಂಗಡಿಗಳು ತೆಗೆಯಬಹುದು ಎಂದು ತಿಳಿದಿರುವುದು ಕೇಳಿ ತುಂಬಾ ಖುಷಿಯಾಗ್ತಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular