ಕೊರೊನಾ ವಾರಿಯರ್ಸ್‌ಗೆ ಸತ್ಕರಿಸಿ ಸೂಗುರೇಶ ವಾರದ ಜನುಮ ದಿನಾಚರಣೆ

0
18

ಸುರಪುರ:ಕೊರೊನಾ ವಾರಿಯರ್ಸ್‌ಗೆ ಸನ್ಮಾನಿಸಿ ಗೌರವಿಸುವ ಜೊತೆಗೆ ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ತಮ್ಮ ಜನುಮ ದಿನವನ್ನು ಆಚರಿಸಿಕೊಂಡರು.

ನಗರದ ಮರಗಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಜನುಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಯುವ ಮುಖಂಡ ರಾಜಾ ಶುಶಾಂತ ನಾಯಕ ಮಾತನಾಡಿ,ಕೊರೊನಾ ವಾರಿಯರ್ಸ್‌ಗಳಾಗಿ ಆಶಾ ಕಾರ್ಯಕರ್ತೆಯರ ಸೇವೆ ಅಮೋಘವಾಗಿದೆ.ಜೀವದ ಹಂಗನ್ನು ತೊರೆದು ಹಗಲಿರಳು ಸೇವೆ ಮಾಡಿದ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಅವರಿಗೆ ಸನ್ಮಾನಿಸಿ ಗೌರವಿಸುವ ಜೊತೆಗೆ ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ಸೂಗುರೇಶ ವಾರದ ಅವರು ಜನುಮ ದಿನ ಆಚರಿಸಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸೂಗುರೇಶ ವಾರದ ಮಾತನಾಡಿ,ಅದ್ಧೂರಿಯಾಗಿ ಜನುಮ ದಿನ ಆಚರಿಸಿಕೊಳ್ಳುವ ಬದಲು ಬಡ ಜನರಿಗೆ ನೆರವಾಗುವುದರಲ್ಲಿ ತುಂಬಾ ಸಂತೋಷವಿದೆ.ಆದ್ದರಿಂದ ಇಂದು ೫೦ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿರುವುದು ಹಾಗು ಆಶಾ ಕಾರ್ಯಕರ್ತೆಯರ ಸೇವೆಗೆ ಗೌರವಿಸಿವುದು ಎಲ್ಲರ ಕರ್ತವ್ಯ ಎಂದು ಭಾವಿಸಿ ಸನ್ಮಾನಿಸಿ ಗೌರವಿಸಿರುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಅನೇಕ ಆಶಾ ಕಾರ್ಯಕರ್ತೆಯರು ಮಾತನಾಡಿ ಸೂಗುರೇಶ ವಾರದ ಅವರ ಸೇವೆಗೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ ಗುಳಗಿ ಮುಖೀದ ಕುಂಡಾಲೆ ಬಸ್ಸಯ್ಯಸ್ವಾಮಿ ಬೋನ್ಹಾಳ ಮಂಜುನಾಥಸ್ವಾಮಿ ತಿಮ್ಮಾಪುರ ಮಲ್ಲು ಖಾದಿ ಮಂಜುಳಾ ಈರಪ್ಪ ಸಜ್ಜನ್ ನಾಗರತ್ನಾ ನಾಗಲಿಕರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here