ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ವಸ್ತ್ರಗಳ ವಿತರಣೆ

0
8

ಸುರಪುರ: ಬೆಂಗಳೂರಿನಲ್ಲಿ ನೆಲೆಸಿರುವ ಡಾ:ಪೂರ್ಣಿಮಾ ರಾಘವೇಂದ್ರ ಕಾಂಬಳೆ ದಂಪತಿಗಳು ತಮ್ಮ ಮಗಳಾದ ಕುಮಾರಿ ಧನ್ಯಾಳ ಹುಟ್ಟು ಹಬ್ಬದ ಅಂಗವಾಗಿ ತಾಲೂಕಿನ ರುಕ್ಮಾಪುರ ಗ್ರಾಮದ ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿನ ಶಿಕ್ಷಕರಿಗೆ ವಸ್ತ್ರಗಳನ್ನು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಕುಮಾರಿ ಧನ್ಯಾಳ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ.

ಈ ಶಾಲೆಯ ಶಿಕ್ಷಕರು ಕಳೆದ ೧೬ ತಿಂಗಳುಗಳಿಂದ ಸಂಬಳವಿಲ್ಲದೆ ಕೊರೊನಾ ಸಂದರ್ಭದಲ್ಲಿ ತೊಂದರೆಪಡುತ್ತಿರುವುದನ್ನು ಅರಿತು ಡಾ:ಪೂರ್ಣಿಮಾ ದಂಪತಿಗಳು ಶಿಕ್ಷಕರಿಗೆ ವಸ್ತ್ರಗಳ ವಿತರಣೆ ಮಾಡುವ ಮೂಲಕ ನೆರವಾಗಿದ್ದಾರೆ.ಸಂಸ್ಥೆಯ ಅಧ್ಯಕ್ಷರಾದ ಸಿ.ಎನ್.ಭಂಡಾರೆ ಮತ್ತು ಕಾರ್ಯದರ್ಶಿ ಬಸ್ಸಪ್ಪ ಸಲೆಗಾರವರು ಶಿಕ್ಷಕರಿಗೆ ವಸ್ತ್ರಗಳನ್ನು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಗಿರಿಜಾ,ಉಷಾ,ಶಂಕ್ರಮ್ಮ,ಪ್ರಭಾವತಿ,ಶಕುಂತಲಾ,ಅರುಣಾ,ನೀಲಮ್ಮ,ಅಕ್ಷಯ್ ಹಾಗು ಶರಣು ಬಳಿಗಾರ ಅವರು ವಸ್ತ್ರಗಳ ಸ್ವೀಕರಿಸಿ ಡ: ಪೂರ್ಣೀಮಾ ದಂಪತಿಗೆ ಧನ್ಯವಾದ ಅರ್ಪಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here