ಜಿ.ಪಂ ತಾ.ಪಂ ಮೀಸಲಾತಿ ತಿದ್ದುಪಡಿಗೆ ಬಾಲರಾಜ್ ಗುತ್ತೇದಾರ ಒತ್ತಾಯ

0
213

ಸೇಡಂ: ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಕ್ಷೇತ್ರಗಳ ಮೀಸಲಾತಿ ಪ್ರಕಟಿಸಿರುವ ಸರಕಾರ ಹಿಂದುಳಿದ ವರ್ಗಗಳನ್ನು ಅನ್ಯಾಯ ಮಾಡಿದೆ ಎಂದು  ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೆದಾರ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಬಿಜೆಪಿ ಸರ್ಕಾರ  ಕಬ್ಬಲಿಗ ಹಾಗೂ ಕುರುಬ , ಮುಸ್ಲಿಮ್, ಇಡಿಗಾ ಸೇರಿದಂತೆ ವಿವಿಧ ಸಮಾಜದವರನ್ನು ಕಡೆಗಣಿಸಿರುವುದು ಮೀಸಲಾತಿಯಿಂದ ಸ್ಪಷ್ಟವಾಗುತ್ತದೆ. ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಕಬ್ಬಲಿಗ ಹಾಗೂ ಕುರುಬ , ಮುಸ್ಲಿಮ್, ಇಡಿಗಾ, ಕುಂಬಾರ,ವಿಶ್ವಕರ್ಮ,ಮಡಿವಾಳ   ಸೇರಿದಂತೆ ವಿವಿಧ  ಸಮಾಜದವರನ್ನು ಎಲ್ಲೂ ಸಹ ಅವಕಾಶ ದೊರೆಯದಂತೆ ಮಾಡಲಾಗಿದೆ.

Contact Your\'s Advertisement; 9902492681

ಹಿಂದೂಳಿದ ವರ್ಗದ ಅನೇಕ ರಾಜಕಾರಣಿಗಳು ಚುನಾವಣೆ ಸ್ಪರ್ದಿಸಲು ಆಸೆ ಹೊಂದಿದು ಈ ಮಿಸಲಾತಿ ಪ್ರಕಟಣೆ ನಂತರ ಅವರ ಆಸೆ ನಿರಾಸೆಯಾಗಿದೆ ಕೂಡಲೆ ಮಿಸಲಾತಿ ತಿದ್ದುಪಡಿ ಮಾಡಿ ಎಲ್ಲಾ ಸಮಾಜದವರಿಗೆ ಮೀಸಲಾತಿಯಲ್ಲಿ ಅವಕಾಶ ನೀಡಬೇಕು ಎಂದು ಬಾಲರಾಜ್ ಗುತ್ತೇದಾರ ಒತ್ತಾಯಿಸಿದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here