ಸೇಡಂ: ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಕ್ಷೇತ್ರಗಳ ಮೀಸಲಾತಿ ಪ್ರಕಟಿಸಿರುವ ಸರಕಾರ ಹಿಂದುಳಿದ ವರ್ಗಗಳನ್ನು ಅನ್ಯಾಯ ಮಾಡಿದೆ ಎಂದು ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೆದಾರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಬಿಜೆಪಿ ಸರ್ಕಾರ ಕಬ್ಬಲಿಗ ಹಾಗೂ ಕುರುಬ , ಮುಸ್ಲಿಮ್, ಇಡಿಗಾ ಸೇರಿದಂತೆ ವಿವಿಧ ಸಮಾಜದವರನ್ನು ಕಡೆಗಣಿಸಿರುವುದು ಮೀಸಲಾತಿಯಿಂದ ಸ್ಪಷ್ಟವಾಗುತ್ತದೆ. ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಕಬ್ಬಲಿಗ ಹಾಗೂ ಕುರುಬ , ಮುಸ್ಲಿಮ್, ಇಡಿಗಾ, ಕುಂಬಾರ,ವಿಶ್ವಕರ್ಮ,ಮಡಿವಾಳ ಸೇರಿದಂತೆ ವಿವಿಧ ಸಮಾಜದವರನ್ನು ಎಲ್ಲೂ ಸಹ ಅವಕಾಶ ದೊರೆಯದಂತೆ ಮಾಡಲಾಗಿದೆ.
ಹಿಂದೂಳಿದ ವರ್ಗದ ಅನೇಕ ರಾಜಕಾರಣಿಗಳು ಚುನಾವಣೆ ಸ್ಪರ್ದಿಸಲು ಆಸೆ ಹೊಂದಿದು ಈ ಮಿಸಲಾತಿ ಪ್ರಕಟಣೆ ನಂತರ ಅವರ ಆಸೆ ನಿರಾಸೆಯಾಗಿದೆ ಕೂಡಲೆ ಮಿಸಲಾತಿ ತಿದ್ದುಪಡಿ ಮಾಡಿ ಎಲ್ಲಾ ಸಮಾಜದವರಿಗೆ ಮೀಸಲಾತಿಯಲ್ಲಿ ಅವಕಾಶ ನೀಡಬೇಕು ಎಂದು ಬಾಲರಾಜ್ ಗುತ್ತೇದಾರ ಒತ್ತಾಯಿಸಿದಾರೆ.